1978ರಿಂದ ನಾಲ್ಕು ದಶಕಗಳಿಗೂ ಮೀರಿ ಅಮೃತೇಶ್ವರಿ, ಪೆರ್ಡೂರು, ಶಿರಸಿ ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿದ ಧಾರೇಶ್ವರರು, ಆಟ ಕೂಟಗಳಲ್ಲಿ ಸಮರ್ಥ ರಂಗ ನಿರ್ದೇಶನ ಮಾಡಿದವರು. ಗುರು ನಾರಣಪ್ಪ ಉಪ್ಪೂರರ ಶಿಷ್ಯರಾಗಿ ಪುರಾಣ ಪ್ರಸಂಗ ಹಾಗೂ ನವೀನ ಪ್ರಸಂಗಗಳಲ್ಲಿ ಯಕ್ಷ ಪರಂಪರೆಯೊಂದಿಗೆ ಸ್ವಂತಿಕೆಯ ಛಾಪು ಮೂಡಿಸಿದವರು. ಧಾರೇಶ್ವರರು ಮೂಲತಃ ಗೋಕರ್ಣದವರು.