ಅಂಕಗಳೇ ಜೀವನವನ್ನು ನಿರ್ಧರಿಸುವುದಿಲ್ಲ. ಶಾಂತ ಮನಸ್ಸಿನಿಂದ, ಇಷ್ಟಪಟ್ಟು ಓದಿದ್ದು ನೆನಪಿನಲ್ಲಿ ಉಳಿಯಲು ಸಾಧ್ಯ. ಯೋಗ, ವ್ಯಾಯಾಮ, ಪ್ರಾರ್ಥನೆ ಮುಂತಾದವುಗಳಿಂದ ಮನಸ್ಸನ್ನು ಹತೋಟಿಯಲ್ಲಿಡಲು ಸಾಧ್ಯ ಎಂದ ಅವರು ಕನಸು, ಶಿಸ್ತು, ಛಲ, ಶ್ರದ್ಧೆ, ಪ್ರಯತ್ನ ಮುಖ್ಯ. ಹೋಲಿಕೆ ಮತ್ತು ಸ್ಪರ್ಧೆ ಬೇಡ. ಪಾಲಕರು ಮಕ್ಕಳ ಓದಿಗೆ ಪ್ರೋತ್ಸಾಹ ನೀಡಬೇಕೇ ಹೊರತು ಬೇರೆಯವರೊಂದಿಗೆ ಹೋಲಿ ಸಬಾರದು ಎಂದು ಸಲಹೆ ನೀಡಿದರು.