ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದು, ಪಿಎಫ್ಐ ನಿಷೇಧಿಸುವಂತೆ ಕಾಂಗ್ರೆಸ್ ಹಾಕಿದ ಸವಾಲನ್ನು ಸ್ವೀಕರಿಸಿ ನಿಷೇಧಿಸಿದ್ದೇವೆ. ಈಗ ಆರ್ಎಸ್ಎಸ್ ಸಂಘಟನೆ ನಿಷೇಧಿಸಿ ಎನ್ನುವ ಕಾಂಗ್ರೆಸ್ ಬುದ್ದಿಮಟ್ಟದ ಬಗ್ಗೆ ತಿಳಿಯುತ್ತಿಲ್ಲ. ದೇಶಭಕ್ತಿ, ಸೇವೆ, ತ್ಯಾಗ, ಬಲಿದಾನ, ಹಾಗೂ ಸರಳತೆ ಮೈಗೂಡಿಸಿಕೊಂಡಿರುವ ಆರ್ಎಸ್ಎಸ್ ಬಗ್ಗೆ ಟೀಕೆ ಸಹಿಸುವುದಿಲ್ಲ. ಪಿಎಫ್ಐ ನಿಷೇಧಿಸಿದ್ದಕ್ಕೆ ಸ್ವಾಗತ ಮಾಡುವ ಬದಲು ಕಾಂಗ್ರೆಸ್ಗೆ ತಳಮಳ, ಗಲಿಬಿಲಿ ಏಕೆ ಎಂದು ಪ್ರಶ್ನಿಸಿದರು.