ಉಡುಪಿ: ವಿದ್ಯುತ್ ಬಳಕೆದಾರರ ಮನೆಗಳಿಗೆ ಸ್ಮಾರ್ಟ್ ಮೀಟರ್ ಹಾಗೂ ಪ್ರೀಪೇಯ್ಡ್ ಮೀಟರ್ ಅಳವಡಿಕೆ ಕುರಿತು ಚರ್ಚೆಗಳು ನಡೆಯುತ್ತಿವೆ. ಆದರೆ, ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಸೋಮವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಸ್ಮಾರ್ಟ್ ಹಾಗೂ ಪ್ರೀಪೇಯ್ಡ್ ಮೀಟರ್ಗಳ ಅಳವಡಿಕೆಯ ಸಾಧಕ ಬಾಧಕಗಳ ಕುರಿತು ಶೀಘ್ರವೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ನಾಡಗೀತೆಯನ್ನು ಎಷ್ಟು ನಿಮಿಷಗಳಿಗೆ ಸೀಮಿತಗೊಳಿಸಬೇಕು, ಹಿನ್ನೆಲೆ ಸಂಗೀತ ಹಾಗೂ ಕನ್ನಡಾಂಬೆ ಭುವನೇಶ್ವರಿಯ ಫೋಟೊ ಹೇಗಿರಬೇಕು ಎಂಬ ಚರ್ಚೆಗಳು ನಡೆಯುತ್ತಿವೆ. ಕೆಲವು ಕಾರ್ಯಕ್ರಮಗಳಲ್ಲಿ ನಾಡಗೀತೆ ಅವಧಿ ಹೆಚ್ಚುಹಾಗೂ ಕಡಿಮೆ ಇರುತ್ತದೆ. ಹಿನ್ನೆಲೆ ಸಂಗೀತವೂ ಬೇರೆ ಬೇರೆಯಾಗಿರುತ್ತದೆ. ಈ ನಿಟ್ಟಿನಲ್ಲಿ ಏಕರೂಪತೆ ತರಲಾಗುವುದು ಎಂದು ತಿಳಿಸಿದರು.
ಜನರ ಆಶೀರ್ವಾದವನ್ನು ಕಳೆದುಕೊಂಡಕಾಂಗ್ರೆಸ್,ಬಿಜೆಪಿ ಸರ್ಕಾರದ ಜನಾಶೀರ್ವಾದ ಯಾತ್ರೆಯ ಬಗ್ಗೆ ಲೇವಡಿ ಮಾಡುತ್ತಿದೆ. ಜನರಿಂದ ದೂರವಾಗಿರುವ ಕಾಂಗ್ರೆಸ್ ನಾಯಕರಿಂದ ಇಂತಹ ಟೀಕೆಗಳು ಬರುವುದು ಸಹಜ ಎಂದು ಸಚಿವ ಸುನಿಲ್ ಕುಮಾರ್ ವ್ಯಂಗ್ಯವಾಡಿದರು.
ಜಯಂತಿಗಳನ್ನು ಸೀಮಿತಗೊಳಿಸುವುದು ಹಾಗೂಮುಂದೆ ಜಯಂತಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವಜನ ಸಬಲೀಕರಣ ಇಲಾಖೆ, ಶಿಕ್ಷಣ ಇಲಾಖೆಗಳು ಜಂಟಿಯಾಗಿ ಆಚರಿಸುವ ಎಂಬ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.