ಹೆಚ್ಚು ಶಿಕ್ಷಿತರನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲಿ ಯುವ ಜನತೆ, ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕುತೂಹಲಕ್ಕಾಗಿ ಆರಂಭವಾಗುವ ಮಾದಕ ದ್ರವ್ಯ ಸೇವನೆ ಮುಂದೆ ವ್ಯಸನವಾಗಿ ಬದಲಾಗಿ, ಭವಿಷ್ಯವನ್ನೇ ನಾಶ ಮಾಡುತ್ತದೆ. ಆತ್ಮಹತ್ಯೆಗೂ ಪ್ರಚೋದನೆ ನೀಡುತ್ತದೆ. ದುಶ್ಚಟಗಳ ವಿರುದ್ಧ ಯುವ ಜನತೆ ಹೋರಾಡಬೇಕು ಎಂದು ಸಲಹೆ ನೀಡಿದರು.