ಎಡೆಸ್ನಾನ ಸಂಬಂಧ ಮಾತನಾಡಿದ ಪೇಜಾವರ ಶ್ರೀಗಳು, ಮಡೆಸ್ನಾನಕ್ಕೆ ವಿರೋಧ ಕೇಳಿಬಂದಿದ್ದರಿಂದ ಶ್ರೀಕೃಷ್ಣಮಠದಲ್ಲಿ ಎರಡೂ ಪ್ರಕಾರದ ಸ್ನಾನಗಳನ್ನು ನಿಲ್ಲಿಸಲಾಗಿದೆ. ಆದರೆ, ಮುಚ್ಲಕೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಚ್ಛೆಯುಳ್ಳ ಭಕ್ತರು ಎಡೆಸ್ನಾನ ಮಾಡಿದ್ದಾರೆ. ಮಡೆಸ್ನಾನವನ್ನು ಒಪ್ಪಲಾಗದು. ಆದರೆ, ಎಡೆಸ್ನಾನ ಭಕ್ತರ ಐಚ್ಛಿಕ ಎಂದರು.