ಸಮರ್ಥ ಕಾಪು ಬಳಿಯ ಆನೆಗುಂದಿ ಸರಸ್ವತಿ ಪೀಠದಲ್ಲಿ ಓದುತ್ತಿದ್ದು, ರಜೆಯ ಮೇಲೆ ಊರಿಗೆ ತೆರಳಿದ್ದ. ತಂದೆ ಪ್ರಭಾಕರ ಪೋದ್ದಾರ ಅವರೊಂದಿಗೆ ಶಾಲೆಗೆ ಮರಳಲು ಬಂದಿದ್ದು. ರಾತ್ರಿ ಬಸ್ಸಿನಲ್ಲಿ ಊರಿಂದ ಬಂದಿದ್ದು ಉಚ್ಚಿಲದ ಮಹಾಲಕ್ಷ್ಮೀ ಶಾಲೆಯ ಬಳಿ ತಂದೆ, ಮಗ ಬಸ್ ಇಳಿದು ರಸ್ತೆ ಪಕ್ಕದಲ್ಲಿ ನಿಂತಿದ್ದ ವೇಳೆ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಸಾಗುತ್ತಿದ್ದ ಅಪರಿಚಿತ ಗೂಡ್ಸ್ ಲಾರಿಯೊಂದು ಡಿಕ್ಕಿ ಹೊಡಿದಿತ್ತು. ಈ ಅಪಘಾತದಲ್ಲಿ ತಂದೆ ಪ್ರಭಾಕರ ಪೋದ್ದಾರ ಸ್ಥಳದಲ್ಲೇ ಮೃತಪಟ್ಟಿದ್ದರು.