<p><strong>ಉಡುಪಿ:</strong> ಈ ಬಾರಿ ಫೆಬ್ರುವರಿ ತಿಂಗಳವರೆಗೂ ಚುಮುಚುಮು ಚಳಿಯ ವಾತಾವರಣವಿದ್ದುದ್ದರಿಂದ ಜೇನು ಕೃಷಿಯಲ್ಲಿ ಉತ್ತಮ ಇಳುವರಿ ಬಂದಿದೆ.</p>.<p>ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಹೆಚ್ಚಾಗಿ ರೈತರು ಜೇನು ಕೃಷಿ ಮಾಡುತ್ತಾರೆ. ಅರಣ್ಯ ಪ್ರದೇಶಗಳಲ್ಲಿ ಕಾಡು ಹೂವುಗಳಾದರೆ ಜೇನು ಇಳುವರಿ ಜಾಸ್ತಿ ಆಗುತ್ತದೆ ಎನ್ನುತ್ತಾರೆ ರೈತರು.</p>.<p>ಈ ಬಾರಿ ಮುಂಜಾನೆ ಚಳಿಯ ವಾತಾವರಣವಿದ್ದು ಹೂಗಳು ಲಭ್ಯತೆ ಹೆಚ್ಚಾಗಿದೆ. ಇದರಿಂದಾಗಿ ಆರಂಭದ ಕೊಯ್ಲಿನಿಂದಲೇ ಅಧಿಕ ಇಳುವರಿ ಬಂದಿದೆ ಎನ್ನುತ್ತಾರೆ ಜೇನು ಕೃಷಿಕರು.</p>.<p>ಡಿಸೆಂಬರ್ ತಿಂಗಳಿನಿಂದ ಆರಂಭಿಸಿ ಮೇ ಕೊನೆಯವರೆಗೆ ಜೇನು ಕೊಯ್ಲು ನಡೆಯುತ್ತದೆ. ಈ ಅವಧಿಯಲ್ಲಿ ಮಳೆ, ಮೋಡ ಮಸುಕಿದ ವಾತಾವರಣ, ಅತಿ ಬಿಸಿಲಿನ ವಾತಾವರಣ ಇದ್ದರೆ ಇಳುವರಿ ಕುಸಿಯುವ ಸಾಧ್ಯತೆ ಇರುತ್ತದೆ. ಈ ಸಲ ಇದುವರೆಗೂ ಜೇನು ಕೃಷಿಗೆ ಪೂರಕವಾದ ವಾತಾವರಣ ಇರುವುದು ಅನುಕೂಲವಾಗಿದೆ ಎಂದು ಹೇಳಿದ್ದಾರೆ.</p>.<p>ಜೇನು ಕೃಷಿ ಮಾಡುವವರು ಜೇನುತುಪ್ಪದ ಜೊತೆಗೆ ಇತರ ಉಪ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ. ಜೇನು ಮೇಣದಿಂದ ಲಿಪ್ ಬಾಮ್ ತಯಾರಿಸಿ ಕೆಲವರು ಮಾರಾಟ ಮಾಡುತ್ತಾರೆ. ವರ್ಷದ ಕೊನೆಯ ಇಳುವರಿಯ ಸಂದರ್ಭದಲ್ಲಿ ತಟ್ಟಿ ಸಹಿತ ಜೇನನ್ನು ಮಾರಾಟ ಮಾಡುತ್ತಾರೆ.</p>.<p>ಜಿಲ್ಲೆಯಲ್ಲಿ 500ಕ್ಕೂ ಅಧಿಕ ಜೇನು ಸಾಕಣೆದಾರರಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಿನ ರೈತರು ಜೇನು ಸಾಕಣೆಯತ್ತ ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ರೈತರು.</p>.<p>‘ಸಾಮಾನ್ಯವಾಗಿ ಒಂದು ಪೆಟ್ಟಿಗೆಯಿಂದ ಸುಮಾರು ಏಳು ಬಾರಿ ಜೇನು ಸಂಗ್ರಹಿಸಬಹುದು. ಹತ್ತರಿಂದ ಹದಿನೈದು ದಿವಸಗಳಿಗೊಮ್ಮೆ ಜೇನು ಕೊಯ್ಲು ಮಾಡುತ್ತೇವೆ. ಈ ಬಾರಿ ಜೇನುಪೆಟ್ಟಿಗೆ ಬೇಗ ತುಂಬುತ್ತಿದೆ’ ಎನ್ನುತ್ತಾರೆ ಕಾರ್ಕಳದ ಜೇನು ಕೃಷಿಕ ಶೈಲೇಶ್ ಮರಾಠೆ.</p>.<p>‘ಈಗಾಗಲೇ ಎರಡು ಕೊಯ್ಲಿನಲ್ಲಿ 180 ಕೆ.ಜಿ. ಇಳುವರಿ ಸಿಕ್ಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಇಳುವರಿ ಸಿಕ್ಕಿದೆ. ಸಾಮಾನ್ಯವಾಗಿ ಋತುಮಾನ ಆರಂಭದಲ್ಲಿ ಇಷ್ಟು ಇಳುವರಿ ಬರುವುದಿಲ್ಲ. ಒಟ್ಟು 80 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದೇನೆ’ ಎಂದೂ ಅವರು ವಿವರಿಸಿದರು.</p>.<p>‘ಮೇ ತಿಂಗಳಲ್ಲಿ ನಾವು ಜೇನು ತಟ್ಟಿಯನ್ನೇ ಬಾಕ್ಸ್ನಲ್ಲಿ ಹಾಕಿ ಮಾರುತ್ತೇವೆ, ಕಳೆದ ವರ್ಷ 300ಕ್ಕೂ ಹೆಚ್ಚು ಬಾಕ್ಸ್ಗಳನ್ನು ಮಾರಾಟ ಮಾಡಿದ್ದೇನೆ. ಈ ಬಾಕ್ಸ್ಗಳಿಗೂ ಹೆಚ್ಚು ಬೇಡಿಕೆ ಇದೆ. ಜೇನು ಕೃಷಿ ಲಾಭದಾಯಕವಾದರೂ ನಿರ್ವಹಣೆ ಕೆಲಸ ಅಧಿಕವಿದೆ ’ ಎನ್ನುತ್ತಾರೆ ಅವರು.</p>.<p>‘ಹೆಚ್ಚಿನ ರೈತರಿಗೆ ಈ ಬಾರಿ ಆರಂಭದ ಜೇನು ಕೊಯ್ಲಿನಲ್ಲಿ ಉತ್ತಮ ಇಳುವರಿ ಲಭಿಸಿದೆ. ಹವಾಮಾನ ವೈಪರೀತ್ಯವಾದರೆ ಇಳುವರಿಯ ಮೇಲೂ ಅಡ್ಡಪರಿಣಾಮವಾಗುತ್ತದೆ. ಈ ಸಲ ಇದುವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ’ ಎಂದೂ ಅವರು ಹೇಳಿದರು.</p>.<div><blockquote>ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದುವರೆಗೆ ಉತ್ತಮ ಇಳುವರಿ ಬಂದಿದೆ. ತೋಟಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ಹೂಗಳ ಸಂಖ್ಯೆ ಜಾಸ್ತಿ ಇದ್ದುದರಿಂದ ಇಳುವರಿಯು ಅಧಿಕವಾಗಿದೆ </blockquote><span class="attribution">ಶೈಲೇಶ್ ಮರಾಠೆ ಜೇನು ಕೃಷಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಈ ಬಾರಿ ಫೆಬ್ರುವರಿ ತಿಂಗಳವರೆಗೂ ಚುಮುಚುಮು ಚಳಿಯ ವಾತಾವರಣವಿದ್ದುದ್ದರಿಂದ ಜೇನು ಕೃಷಿಯಲ್ಲಿ ಉತ್ತಮ ಇಳುವರಿ ಬಂದಿದೆ.</p>.<p>ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶಗಳಲ್ಲಿ ಹೆಚ್ಚಾಗಿ ರೈತರು ಜೇನು ಕೃಷಿ ಮಾಡುತ್ತಾರೆ. ಅರಣ್ಯ ಪ್ರದೇಶಗಳಲ್ಲಿ ಕಾಡು ಹೂವುಗಳಾದರೆ ಜೇನು ಇಳುವರಿ ಜಾಸ್ತಿ ಆಗುತ್ತದೆ ಎನ್ನುತ್ತಾರೆ ರೈತರು.</p>.<p>ಈ ಬಾರಿ ಮುಂಜಾನೆ ಚಳಿಯ ವಾತಾವರಣವಿದ್ದು ಹೂಗಳು ಲಭ್ಯತೆ ಹೆಚ್ಚಾಗಿದೆ. ಇದರಿಂದಾಗಿ ಆರಂಭದ ಕೊಯ್ಲಿನಿಂದಲೇ ಅಧಿಕ ಇಳುವರಿ ಬಂದಿದೆ ಎನ್ನುತ್ತಾರೆ ಜೇನು ಕೃಷಿಕರು.</p>.<p>ಡಿಸೆಂಬರ್ ತಿಂಗಳಿನಿಂದ ಆರಂಭಿಸಿ ಮೇ ಕೊನೆಯವರೆಗೆ ಜೇನು ಕೊಯ್ಲು ನಡೆಯುತ್ತದೆ. ಈ ಅವಧಿಯಲ್ಲಿ ಮಳೆ, ಮೋಡ ಮಸುಕಿದ ವಾತಾವರಣ, ಅತಿ ಬಿಸಿಲಿನ ವಾತಾವರಣ ಇದ್ದರೆ ಇಳುವರಿ ಕುಸಿಯುವ ಸಾಧ್ಯತೆ ಇರುತ್ತದೆ. ಈ ಸಲ ಇದುವರೆಗೂ ಜೇನು ಕೃಷಿಗೆ ಪೂರಕವಾದ ವಾತಾವರಣ ಇರುವುದು ಅನುಕೂಲವಾಗಿದೆ ಎಂದು ಹೇಳಿದ್ದಾರೆ.</p>.<p>ಜೇನು ಕೃಷಿ ಮಾಡುವವರು ಜೇನುತುಪ್ಪದ ಜೊತೆಗೆ ಇತರ ಉಪ ಉತ್ಪನ್ನಗಳನ್ನು ಅವಲಂಬಿಸಿದ್ದಾರೆ. ಜೇನು ಮೇಣದಿಂದ ಲಿಪ್ ಬಾಮ್ ತಯಾರಿಸಿ ಕೆಲವರು ಮಾರಾಟ ಮಾಡುತ್ತಾರೆ. ವರ್ಷದ ಕೊನೆಯ ಇಳುವರಿಯ ಸಂದರ್ಭದಲ್ಲಿ ತಟ್ಟಿ ಸಹಿತ ಜೇನನ್ನು ಮಾರಾಟ ಮಾಡುತ್ತಾರೆ.</p>.<p>ಜಿಲ್ಲೆಯಲ್ಲಿ 500ಕ್ಕೂ ಅಧಿಕ ಜೇನು ಸಾಕಣೆದಾರರಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಿನ ರೈತರು ಜೇನು ಸಾಕಣೆಯತ್ತ ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ರೈತರು.</p>.<p>‘ಸಾಮಾನ್ಯವಾಗಿ ಒಂದು ಪೆಟ್ಟಿಗೆಯಿಂದ ಸುಮಾರು ಏಳು ಬಾರಿ ಜೇನು ಸಂಗ್ರಹಿಸಬಹುದು. ಹತ್ತರಿಂದ ಹದಿನೈದು ದಿವಸಗಳಿಗೊಮ್ಮೆ ಜೇನು ಕೊಯ್ಲು ಮಾಡುತ್ತೇವೆ. ಈ ಬಾರಿ ಜೇನುಪೆಟ್ಟಿಗೆ ಬೇಗ ತುಂಬುತ್ತಿದೆ’ ಎನ್ನುತ್ತಾರೆ ಕಾರ್ಕಳದ ಜೇನು ಕೃಷಿಕ ಶೈಲೇಶ್ ಮರಾಠೆ.</p>.<p>‘ಈಗಾಗಲೇ ಎರಡು ಕೊಯ್ಲಿನಲ್ಲಿ 180 ಕೆ.ಜಿ. ಇಳುವರಿ ಸಿಕ್ಕಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಇಳುವರಿ ಸಿಕ್ಕಿದೆ. ಸಾಮಾನ್ಯವಾಗಿ ಋತುಮಾನ ಆರಂಭದಲ್ಲಿ ಇಷ್ಟು ಇಳುವರಿ ಬರುವುದಿಲ್ಲ. ಒಟ್ಟು 80 ಜೇನು ಪೆಟ್ಟಿಗೆಗಳನ್ನು ಇಟ್ಟಿದ್ದೇನೆ’ ಎಂದೂ ಅವರು ವಿವರಿಸಿದರು.</p>.<p>‘ಮೇ ತಿಂಗಳಲ್ಲಿ ನಾವು ಜೇನು ತಟ್ಟಿಯನ್ನೇ ಬಾಕ್ಸ್ನಲ್ಲಿ ಹಾಕಿ ಮಾರುತ್ತೇವೆ, ಕಳೆದ ವರ್ಷ 300ಕ್ಕೂ ಹೆಚ್ಚು ಬಾಕ್ಸ್ಗಳನ್ನು ಮಾರಾಟ ಮಾಡಿದ್ದೇನೆ. ಈ ಬಾಕ್ಸ್ಗಳಿಗೂ ಹೆಚ್ಚು ಬೇಡಿಕೆ ಇದೆ. ಜೇನು ಕೃಷಿ ಲಾಭದಾಯಕವಾದರೂ ನಿರ್ವಹಣೆ ಕೆಲಸ ಅಧಿಕವಿದೆ ’ ಎನ್ನುತ್ತಾರೆ ಅವರು.</p>.<p>‘ಹೆಚ್ಚಿನ ರೈತರಿಗೆ ಈ ಬಾರಿ ಆರಂಭದ ಜೇನು ಕೊಯ್ಲಿನಲ್ಲಿ ಉತ್ತಮ ಇಳುವರಿ ಲಭಿಸಿದೆ. ಹವಾಮಾನ ವೈಪರೀತ್ಯವಾದರೆ ಇಳುವರಿಯ ಮೇಲೂ ಅಡ್ಡಪರಿಣಾಮವಾಗುತ್ತದೆ. ಈ ಸಲ ಇದುವರೆಗೆ ಯಾವುದೇ ಸಮಸ್ಯೆ ಎದುರಾಗಿಲ್ಲ’ ಎಂದೂ ಅವರು ಹೇಳಿದರು.</p>.<div><blockquote>ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಇದುವರೆಗೆ ಉತ್ತಮ ಇಳುವರಿ ಬಂದಿದೆ. ತೋಟಗಳಲ್ಲಿ ಅರಣ್ಯ ಪ್ರದೇಶಗಳಲ್ಲಿ ಹೂಗಳ ಸಂಖ್ಯೆ ಜಾಸ್ತಿ ಇದ್ದುದರಿಂದ ಇಳುವರಿಯು ಅಧಿಕವಾಗಿದೆ </blockquote><span class="attribution">ಶೈಲೇಶ್ ಮರಾಠೆ ಜೇನು ಕೃಷಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>