<p>ಬ್ರಹ್ಮಾವರ: ಡಿಜಿಟಲ್ ಚಾನೆಲ್ನಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರು ತನ್ನ ಬೆಂಬಲಿಗರೊಂದಿಗೆ ವರದಿಗಾರನ ಮನೆಗೆ ಅಕ್ರಮ ಪ್ರವೇಶ ಮಾಡಿ, ಕೊಲೆ ಬೆದರಿಕೆ ಹಾಕಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ವಡ್ಡರ್ಸೆ ಗ್ರಾಮದ ಕುಂಬಾರಬೆಟ್ಟುವಿನ ಪತ್ರಕರ್ತ ಪ್ರಣುತ್ ಕುಮಾರ್ ಎಂಬುವವರು ಈಚೆಗೆ ಮೀನುಗಾರಿಕೆ ಹಾಗೂ ಕೊಜೆ ಮಣ್ಣಿನ ವಿಚಾರವಾಗಿ ವರದಿ ಮಾಡಿದ್ದರು. ಈ ವರದಿಯಿಂದ ಕುಪಿತಗೊಂಡ ಅಜಿತ್ ಕುಮಾರ್ ಶೆಟ್ಟಿ, ಯಾಳಹಕ್ಲು ಚಂದ್ರಶೆಟ್ಟಿ ಹಾಗೂ ಅಪರಿಚಿತ ಮಹಿಳೆಯೊಬ್ಬರು ಏ.15ರಂದು ಪ್ರಣುತ್ ಅವರ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ಹಲ್ಲೆ- ಪ್ರಕರಣ ದಾಖಲು: ಮೂಡುಗಿಳಿಯಾರು ಗ್ರಾಮದ ಆರತಿ ಗಿಳಿಯಾರು ಎಂಬುವವರಿಗೆ ಹಲ್ಲೆ ನಡೆಸಿದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಪ್ರಣುತ್ ಗಾಣಿಗ ಎಂಬುವವರ ಮನೆ ಹತ್ತಿರದ ಜಾಗದಲ್ಲಿ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ ಜಿಪಿಎಸ್ ಪೋಟೊ ತೆಗೆಯುತ್ತಿದ್ದಾಗ ಪ್ರಣುತ್ ಹಾಗೂ ಇತರರು ಹಲ್ಲೆ ಮಾಡಿರುವುದಾಗಿ ಪತ್ರಕರ್ತೆ ಆರತಿ ಗಿಳಿಯಾರು ದೂರಿನಲ್ಲಿ ಆರೋಪಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-28-1777715524</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ರಹ್ಮಾವರ: ಡಿಜಿಟಲ್ ಚಾನೆಲ್ನಲ್ಲಿ ತಮ್ಮ ವಿರುದ್ಧ ವರದಿ ಪ್ರಸಾರ ಮಾಡಿದ್ದಕ್ಕೆ ವ್ಯಕ್ತಿಯೊಬ್ಬರು ತನ್ನ ಬೆಂಬಲಿಗರೊಂದಿಗೆ ವರದಿಗಾರನ ಮನೆಗೆ ಅಕ್ರಮ ಪ್ರವೇಶ ಮಾಡಿ, ಕೊಲೆ ಬೆದರಿಕೆ ಹಾಕಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ವಡ್ಡರ್ಸೆ ಗ್ರಾಮದ ಕುಂಬಾರಬೆಟ್ಟುವಿನ ಪತ್ರಕರ್ತ ಪ್ರಣುತ್ ಕುಮಾರ್ ಎಂಬುವವರು ಈಚೆಗೆ ಮೀನುಗಾರಿಕೆ ಹಾಗೂ ಕೊಜೆ ಮಣ್ಣಿನ ವಿಚಾರವಾಗಿ ವರದಿ ಮಾಡಿದ್ದರು. ಈ ವರದಿಯಿಂದ ಕುಪಿತಗೊಂಡ ಅಜಿತ್ ಕುಮಾರ್ ಶೆಟ್ಟಿ, ಯಾಳಹಕ್ಲು ಚಂದ್ರಶೆಟ್ಟಿ ಹಾಗೂ ಅಪರಿಚಿತ ಮಹಿಳೆಯೊಬ್ಬರು ಏ.15ರಂದು ಪ್ರಣುತ್ ಅವರ ಮನೆಗೆ ಬಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>ಹಲ್ಲೆ- ಪ್ರಕರಣ ದಾಖಲು: ಮೂಡುಗಿಳಿಯಾರು ಗ್ರಾಮದ ಆರತಿ ಗಿಳಿಯಾರು ಎಂಬುವವರಿಗೆ ಹಲ್ಲೆ ನಡೆಸಿದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಪ್ರಣುತ್ ಗಾಣಿಗ ಎಂಬುವವರ ಮನೆ ಹತ್ತಿರದ ಜಾಗದಲ್ಲಿ ಒತ್ತುವರಿ ಮಾಡಿ ಶೆಡ್ ನಿರ್ಮಾಣ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿ ಜಿಪಿಎಸ್ ಪೋಟೊ ತೆಗೆಯುತ್ತಿದ್ದಾಗ ಪ್ರಣುತ್ ಹಾಗೂ ಇತರರು ಹಲ್ಲೆ ಮಾಡಿರುವುದಾಗಿ ಪತ್ರಕರ್ತೆ ಆರತಿ ಗಿಳಿಯಾರು ದೂರಿನಲ್ಲಿ ಆರೋಪಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260417-28-1777715524</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>