<p>ಉಡುಪಿ: ‘ಸರಕು ಉತ್ಪಾದನೆ ಮತ್ತು ಲಾಭದ ದೃಷ್ಟಿಯನ್ನು ಹೊಂದಿರುವ ಬಂಡವಾಳಶಾಹಿಯು ಇಂದು ಸಮಾಜದ ಎಲ್ಲರನ್ನೂ ಅದರ ದಾಸರನ್ನಾಗಿಸಿದೆ’ ಎಂದು ಚಿಂತಕ ಕೆ. ಫಣಿರಾಜ್ ಹೇಳಿದರು.</p>.<p>ಭಾರತ ಜ್ಞಾನ–ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಗರದ ಎಂಜಿಎಂ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊ. ಮಾಧವ ಗಾಡ್ಗೀಳ್ ನೆನಪಿನ ಪರಿಸರ ಮತ್ತು ಶಿಕ್ಷಣ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಬಂಡವಾಳಶಾಹಿಯು ಅದರ ಸರಕುಗಳನ್ನು ನಿತ್ಯವೂ ಜನರು ಕೊಂಡುಕೊಳ್ಳುವಂತಹ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದೆ. ನಾವು ಅದರ ಸರಪಳಿಯನ್ನು ಕಡಿಯದೆ ಹೋದರೆ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ ಎಂದರು.</p>.<p>ಬಂಡವಾಳಶಾಹಿಯ ವಿಷ ವರ್ತುಲಕ್ಕೆ ಪೆಟ್ಟುಕೊಡದೆ ಪರಿಸರ ರಕ್ಷಣೆಗಾಗಿ ನಾವು ಏನೆಲ್ಲ ಪ್ರಯತ್ನ ಮಾಡುತ್ತೇವೋ ಅವೆಲ್ಲವೂ ವ್ಯರ್ಥ ಎಂದು ತಿಳಿಸಿದರು.</p>.<p>ಪರಿಸರದ ಬಗ್ಗೆ ಮಾತನಾಡುವವರು ಶಿಕ್ಷಣದ ಬಗ್ಗೆಯೂ ಮಾತನಾಡಬೇಕು. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಬಂಡವಾಳಶಾಹಿಯ ಪ್ರಭಾವದ ವಿರುದ್ಧ ಹೋರಾಟ ಮಾಡಬೇಕು. ಹೀಗೆ ಎಲ್ಲರು ಸೇರಿ ಗುದ್ದು ಕೊಟ್ಟಾಗ ಯುದ್ಧ ಇಲ್ಲದ ಶಾಂತಿಯುತ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.</p>.<p>ಅಧ್ಯಕ್ಷತೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಶುಭಂಕರ್ ಚಕ್ರವರ್ತಿ ವಹಿಸಿದ್ದರು. ಚೆನ್ನೈನ ಕಂಪ್ಯೂಟರ್ ವಿಜ್ಞಾನಿ ಆರ್.ರಾಮಾನುಜಂ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲೆಯ ಅಧ್ಯಕ್ಷೆ ಸೌಭಾಗ್ಯ ಸಿ. ಮಾತನಾಡಿದರು.</p>.<p>ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ.ಪ್ರಶಾಂತ ಬಾಬು ಉಪಸ್ಥಿತರಿದ್ದರು.</p>.<p>ಟೀಚರ್ ಶೈಕ್ಷಣಿಕ ಪತ್ರಿಕೆಯ ಸಂಪಾದಕ ಉದಯ ಗಾಂವಕಾರ ಸ್ವಾಗತಿಸಿದರು. ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ವಂದಿಸಿದರು. ರವಿ ಕಟ್ಕೆರೆ ಕಾರ್ಯಕ್ರಮ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-28-1359207264</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಡುಪಿ: ‘ಸರಕು ಉತ್ಪಾದನೆ ಮತ್ತು ಲಾಭದ ದೃಷ್ಟಿಯನ್ನು ಹೊಂದಿರುವ ಬಂಡವಾಳಶಾಹಿಯು ಇಂದು ಸಮಾಜದ ಎಲ್ಲರನ್ನೂ ಅದರ ದಾಸರನ್ನಾಗಿಸಿದೆ’ ಎಂದು ಚಿಂತಕ ಕೆ. ಫಣಿರಾಜ್ ಹೇಳಿದರು.</p>.<p>ಭಾರತ ಜ್ಞಾನ–ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಗರದ ಎಂಜಿಎಂ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರೊ. ಮಾಧವ ಗಾಡ್ಗೀಳ್ ನೆನಪಿನ ಪರಿಸರ ಮತ್ತು ಶಿಕ್ಷಣ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>ಬಂಡವಾಳಶಾಹಿಯು ಅದರ ಸರಕುಗಳನ್ನು ನಿತ್ಯವೂ ಜನರು ಕೊಂಡುಕೊಳ್ಳುವಂತಹ ಅನಿವಾರ್ಯತೆಯನ್ನು ಸೃಷ್ಟಿಸುತ್ತಿದೆ. ನಾವು ಅದರ ಸರಪಳಿಯನ್ನು ಕಡಿಯದೆ ಹೋದರೆ ಪರಿಸರ ಸಂರಕ್ಷಣೆ ಸಾಧ್ಯವಿಲ್ಲ ಎಂದರು.</p>.<p>ಬಂಡವಾಳಶಾಹಿಯ ವಿಷ ವರ್ತುಲಕ್ಕೆ ಪೆಟ್ಟುಕೊಡದೆ ಪರಿಸರ ರಕ್ಷಣೆಗಾಗಿ ನಾವು ಏನೆಲ್ಲ ಪ್ರಯತ್ನ ಮಾಡುತ್ತೇವೋ ಅವೆಲ್ಲವೂ ವ್ಯರ್ಥ ಎಂದು ತಿಳಿಸಿದರು.</p>.<p>ಪರಿಸರದ ಬಗ್ಗೆ ಮಾತನಾಡುವವರು ಶಿಕ್ಷಣದ ಬಗ್ಗೆಯೂ ಮಾತನಾಡಬೇಕು. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಬಂಡವಾಳಶಾಹಿಯ ಪ್ರಭಾವದ ವಿರುದ್ಧ ಹೋರಾಟ ಮಾಡಬೇಕು. ಹೀಗೆ ಎಲ್ಲರು ಸೇರಿ ಗುದ್ದು ಕೊಟ್ಟಾಗ ಯುದ್ಧ ಇಲ್ಲದ ಶಾಂತಿಯುತ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.</p>.<p>ಅಧ್ಯಕ್ಷತೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಉಪಾಧ್ಯಕ್ಷ ಶುಭಂಕರ್ ಚಕ್ರವರ್ತಿ ವಹಿಸಿದ್ದರು. ಚೆನ್ನೈನ ಕಂಪ್ಯೂಟರ್ ವಿಜ್ಞಾನಿ ಆರ್.ರಾಮಾನುಜಂ, ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಸನ ಜಿಲ್ಲೆಯ ಅಧ್ಯಕ್ಷೆ ಸೌಭಾಗ್ಯ ಸಿ. ಮಾತನಾಡಿದರು.</p>.<p>ವೇದಿಕೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎ.ಪ್ರಶಾಂತ ಬಾಬು ಉಪಸ್ಥಿತರಿದ್ದರು.</p>.<p>ಟೀಚರ್ ಶೈಕ್ಷಣಿಕ ಪತ್ರಿಕೆಯ ಸಂಪಾದಕ ಉದಯ ಗಾಂವಕಾರ ಸ್ವಾಗತಿಸಿದರು. ಸಮಿತಿಯ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ನಾಯಕ್ ಪಟ್ಲ ವಂದಿಸಿದರು. ರವಿ ಕಟ್ಕೆರೆ ಕಾರ್ಯಕ್ರಮ ನಿರೂಪಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260513-28-1359207264</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>