ಇತಿಹಾಸ, ಪುರಾಣ, ಪ್ರಾಚೀನ ಕಾವ್ಯಗಳನ್ನು ಅಕ್ಷರ ರೂಪಕ್ಕಿಳಿಸಲು ಶ್ರೀತಾಳೆ ಮರಗಳ ಗರಿಗಳನ್ನು ತಾಡೋಲೆ ಗ್ರಂಥಗಳಾಗಿ ಬಳಕೆ ಮಾಡಲಾಗುತ್ತಿತ್ತು. ಇಂದಿಗೂ ಮರದ ಗರಿಗಳನ್ನು ತಾಡೋಲೆಯಾಗಿ ಬಳಸುವ ಪ್ರತೀತಿ ಕೆಲವು ದೇವಸ್ಥಾನಗಳಲ್ಲಿ ರೂಢಿಯಲ್ಲಿದೆ. ಬೆಟ್ಟ ಜರಿಯುವುದನ್ನು ತಪ್ಪಿಸಲು, ಮಣ್ಣಿನ ಸವಕಳಿ ತಡೆಗೆ ಶ್ರೀತಾಳೆ ಮರಗಳು ಬಹಳ ಉಪಯುಕ್ತವಾಗಿದ್ದು, ಕಾಡಿನೊಳಗೆ ಹೆಚ್ಚು ಗಿಡಗಳನ್ನು ನೆಡಬೇಕು ಎಂದು ಮನವಿ ಮಾಡಿದರು.