<p><strong>ಉಡುಪಿ:</strong> ಜಿಲ್ಲೆಯ ವಿವಿಧೆಡೆ ವಾಣಿಜ್ಯ ಕಟ್ಟಡಗಳಲ್ಲಿ ಪದೇ ಪದೇ ಅಗ್ನಿ ಅನಾಹುತಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.</p>.<p>ಕೆಲ ತಿಂಗಳ ಹಿಂದೆ ಕುಂದಾಪುರ ನಗರದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಿಂದಾಗಿ ಹಲವು ಅಂಗಡಿಗಳು ಭಸ್ಮವಾದರೆ, ಕಳೆದ ವಾರ ಉಡುಪಿ ನಗರದ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ್ದ ಭಾರಿ ಅಗ್ನಿ ಅನಾಹುತವು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು.</p>.<p>ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಅಂಗಡಿಯಲ್ಲಿ ಅಗ್ನಿ ಅನಾಹುತ ಸಂಭವಿಸಿ, ಬಳಿಕ ಇತರ ಅಂಗಡಿಗಳಿಗೂ ವ್ಯಾಪಿಸಿ ಮೊಬೈಲ್ ಫೋನ್ ಮಾರಾಟ ಮಾಡುವ ಅಂಗಡಿಯೂ ಸೇರಿದಂತೆ ಹಲವು ಅಂಗಡಿಗಳು ಸುಟ್ಟು ಕರಕಲಾಗಿ ಭಾರಿ ನಷ್ಟ ಸಂಭವಿಸಿತ್ತು.</p>.<p>ಬೇಸಿಗೆ ಕಾಲದಲ್ಲಿ ಪದೇ ಪದೇ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದರೂ ವಾಣಿಜ್ಯ ಕಟ್ಟಡದವರು, ಅಂಗಡಿಯವರು ಸಮರ್ಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.</p>.<p>21 ಮೀಟರ್ ಅಥವಾ ಅದಕ್ಕಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಕಡ್ಡಾಯವಾಗಿ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಅದಕ್ಕಿಂತ ಸಣ್ಣ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿಲ್ಲ ಎಂಬ ದೂರುಗಳೂ ಕೇಳಿ ಬರುತ್ತಿವೆ.</p>.<p>ಹೆಚ್ಚಿನ ಅಂಗಡಿಗಳಲ್ಲಿ ಅಗ್ನಿ ನಂದಕಗಳು ಕೂಡ ಇರುವುದಿಲ್ಲ. ಇದರಿಂದ ಬೆಂಕಿ ಅವಘಡ ಸಂಭವಿಸಿದಾಗ ಪಕ್ಕನೆ ಅಗ್ನಿ ನಂದಿಸಲು ಸಾಧ್ಯವಾಗದೆ ದೊಡ್ಡ ಅನಾಹುತಗಳು ಸಂಭವಿಸುತ್ತಿವೆ ಎನ್ನುತ್ತವೆ ಮೂಲಗಳು.</p>.<p>ಕೆಲವು ಕಟ್ಟಡಗಳಲ್ಲಿ ಸಮರ್ಪಕ ನೀರಿನ ವ್ಯವಸ್ಥೆಯೂ ಇಲ್ಲದಿರುವುದು ಅಗ್ನಿ ಅನಾಹುತದ ಸಂದರ್ಭಗಳಲ್ಲಿ ಸಮಸ್ಯೆಯಾಗುತ್ತಿದೆ ಎಂದೂ ಹೇಳಿವೆ.</p>.<p>ಜಿಲ್ಲೆಯ ಅಗ್ನಿ ಶಾಮಕ ದಳದಲ್ಲಿ ಜಲವಾಹನಗಳ ಕೊರತೆ ಇರುವುದು ಕೂಡ ಅಗ್ನಿ ಅನಾಹುತ ಸಂಭವಿಸಿದಾಗ ಸಮಸ್ಯೆ ತಂದೊಡ್ಡುತ್ತಿದೆ. ಈಚೆಗೆ ನಗರದ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದಾಗ ಉಡುಪಿ ಘಟಕದ ಎರಡು ಜಲವಾಹನಗಳು ಬೇರೆ ಕಡೆಗೆ ಬೆಂಕಿ ನಂದಿಸಲು ತೆರಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಮಣಿಪಾಲದಲ್ಲಿ ಅಗ್ನಿಶಾಮಕ ದಳದ ಹೊಸ ಠಾಣೆಯ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಪಡುಬಿದ್ರಿಯಲ್ಲಿ ಠಾಣೆಯ ಶೇ 80ರಷ್ಟು ಕಾಮಗಾರಿ ಮುಗಿದಿದೆ. ಹೆಬ್ರಿಯಲ್ಲಿ ಜಾಗ ಮಂಜೂರಾಗಿದೆ. ಬ್ರಹ್ಮಾವರದ ಚಾಂತಾರಿನಲ್ಲಿ ಕಟ್ಟಡ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ. ಶಿರ್ವ ಮತ್ತು ಸಿದ್ಧಾಪುರದಲ್ಲಿ ಹೊಸ ಠಾಣೆ ನಿರ್ಮಾಣಕ್ಕೆ ಜಾಗ ಮಂಜೂರಾಗಿದೆ’ ಎಂದು ಅಗ್ನಿ ಶಾಮಕ ದಳದ ಮೂಲಗಳು ತಿಳಿಸಿವೆ.</p>.<p><strong>ಬಲವರ್ಧನೆಯಾಗಬೇಕಿದೆ ಅಗ್ನಿಶಾಮಕ ದಳ</strong></p><p>ಜಿಲ್ಲೆಯಲ್ಲಿ ಜಲವಾಹನಗಳ ಕೊರತೆ ಇರುವುದರಿಂದ ದೊಡ್ಡ ಅಗ್ನಿ ಅನಾಹುತಗಳು ಸಂಭವಿಸಿದಾಗ ಬೆಂಕಿ ನಂದಿಸಲು ಮಂಗಳೂರು, ಚಿಕ್ಕಮಗಳೂರು ಮೊದಲಾದ ಕಡೆಗಳಿಂದ ಹಾಗೂ ಖಾಸಗಿ ಕಂಪನಿಯ ಜಲವಾಹನಗಳನ್ನು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.</p><p>15 ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಮಾರ್ಗಸೂಚಿ ಜಾರಿಗೆ ಬಂದ ಬಳಿಕ ಜಿಲ್ಲೆಯ ಅಗ್ನಿಶಾಮಕ ಠಾಣೆಗಳಲ್ಲಿ ಹಳೆಯ ಜಲವಾಹನಗಳು ನಿಷ್ಪ್ರಯೋಜಕವಾಗಿವೆ.</p><p>ಜಿಲ್ಲೆಯ ಅಗ್ನಿಶಾಮಕ ದಳದಲ್ಲಿ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಅಂದಾಜು ಶೇ 40ರಷ್ಟು ಸಿಬ್ಬಂದಿ ಕೊರತೆ ಇದೆ ಎಂದು ಮೂಲಗಳು ತಿಳಿಸಿವೆ.</p>.<p><strong>‘ಏರಿಯಲ್ ಪ್ಲಾಟ್ಫಾರ್ಮ್ ವಾಹನಕ್ಕೆ ಪ್ರಸ್ತಾವ’</strong></p><p>‘ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ದುರಂತ ಸಂಭವಿಸಿದರೆ ಬೆಂಕಿ ನಂದಿಸುವ ಏರಿಯಲ್ ಪ್ಲಾಟ್ಫಾರ್ಮ್ ವಾಹನವು ಉಡುಪಿ ಜಿಲ್ಲೆಯಲ್ಲಿಲ್ಲ. ಇಂತಹ ವಾಹನವನ್ನು ಒದಗಿಸುವಂತೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಉಡುಪಿ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟ್ಕರ್ ತಿಳಿಸಿದ್ದಾರೆ.</p><p>‘ಏರಿಯಲ್ ಪ್ಲಾಟ್ಫಾರ್ಮ್ ವಾಹನವು ದುಬಾರಿಯಾಗಿದ್ದು, ಅಂತಹ ವಾಹನಗಳನ್ನು ಫಿನ್ಲ್ಯಾಂಡ್ನಲ್ಲಿ ತಯಾರಿಸಲಾಗುತ್ತದೆ. ಬೆಂಗಳೂರು ಮೊದಲಾದ ಮಹಾನಗರಗಳ ಅಗ್ನಿಶಾಮಕ ದಳದಲ್ಲಿ ಆ ವಾಹನವಿದೆ’ ಎಂದು ಅವರು ಹೇಳಿದರು.</p><p>‘ನಗರ ವ್ಯಾಪ್ತಿಯಲ್ಲಿ ದೊಡ್ಡ ಅಗ್ನಿ ಅನಾಹುತಗಳು ಸಂಭವಿಸಿದಾಗ ನೀರಿನ ಕೊರತೆ ಕಾಡುತ್ತದೆ. ಆ ಕಾರಣಕ್ಕೆ ನಗರದ ಪ್ರಮುಖ ಭಾಗಗಳಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಹೈಡ್ರೆಂಟ್ ಪಾಯಿಂಟ್ಗಳನ್ನು ಸ್ಥಾಪನೆ ಮಾಡಿದರೆ ಅನುಕೂಲವಾಗಲಿದೆ. ಹೈಡ್ರೆಂಟ್ ಸ್ಥಾಪಿಸುವಂತೆ ನಗರಸಭೆಗೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.</p><p>‘ಹೈಡ್ರೆಂಟ್ ಪಾಯಿಂಟ್ಗಳು ನೀರಿನ ಟ್ಯಾಂಕ್ಗಳಿಗೆ ಜೋಡಣೆಯಾಗಿದ್ದು, ಅದರಿಂದ ಅಗ್ನಿಶಾಮಕ ದಳದ ಜಲವಾಹನಗಳಿಗೆ ನೀರು ಪಡೆಯಲು ಸಾಧ್ಯವಾಗುತ್ತದೆ. ಉಡುಪಿ ನಗರದಲ್ಲಿ ನಾಲ್ಕೈದು ಕಡೆ ಹೈಡ್ರೆಂಟ್ ಪಾಯಿಂಟ್ಗಳನ್ನು ಸ್ಥಾಪಿಸುವ ಅಗತ್ಯವಿದೆ’ ಎಂದು ಅವರು ವಿವರಿಸಿದರು.</p>.<p><strong>ಅಗ್ನಿ ನಂದಕ ಇಟ್ಟುಕೊಳ್ಳಲು ಸೂಚನೆ</strong></p><p>‘ನಗರಸಭೆ ವ್ಯಾಪ್ತಿಯ ಪ್ರತಿ ವಾಣಿಜ್ಯ ಕಟ್ಟಡಗಳಲ್ಲೂ ಅಗ್ನಿ ನಂದಕಗಳನ್ನು ಇಟ್ಟುಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ. ಅಂಗಡಿಯವರಿಗೆ ಅಗ್ನಿ ನಂದಕ ಸಾಧನಗಳನ್ನು ಬಳಸುವ ಬಗ್ಗೆ ತರಬೇತಿ ನೀಡುವ ಚಿಂತನೆಯೂ ಇದೆ’ ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದ್ದಾರೆ.</p><p>‘ರಾಸಾಯನಿಕ ದ್ರವ್ಯಗಳನ್ನು ಸಂಗ್ರಹಿಸಿಡುವ, ಪ್ಲಾಸ್ಟಿಕ್ ಸಾಮಗ್ರಿಗಳನ್ನು ದಾಸ್ತಾನಿರಿಸುವ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಅಂಗಡಿಯವರಿಗೆ ಸೂಚನೆ ನೀಡಿದ್ದೇವೆ’ ಎಂದೂ ಅವರು ಹೇಳಿದರು.</p>.<div><blockquote>ಎಲ್ಲಾ ವಾಣಿಜ್ಯ ಕಟ್ಟಡಗಳಲ್ಲೂ ಅಗ್ನಿ ನಂದಕಗಳನ್ನು ಅಳವಡಿಸಿಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಪರಿಶೀಲನೆ ನಡೆಸಬೇಕು </blockquote><span class="attribution">ಗಣೇಶ್ರಾಜ್ ಸರಳಬೆಟ್ಟು, ಸಾಮಾಜಿಕ ಕಾರ್ಯಕರ್ತ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-28-1692084549</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಜಿಲ್ಲೆಯ ವಿವಿಧೆಡೆ ವಾಣಿಜ್ಯ ಕಟ್ಟಡಗಳಲ್ಲಿ ಪದೇ ಪದೇ ಅಗ್ನಿ ಅನಾಹುತಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.</p>.<p>ಕೆಲ ತಿಂಗಳ ಹಿಂದೆ ಕುಂದಾಪುರ ನಗರದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಿಂದಾಗಿ ಹಲವು ಅಂಗಡಿಗಳು ಭಸ್ಮವಾದರೆ, ಕಳೆದ ವಾರ ಉಡುಪಿ ನಗರದ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ್ದ ಭಾರಿ ಅಗ್ನಿ ಅನಾಹುತವು ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿತ್ತು.</p>.<p>ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಂಗ್ರಹಿಸಿಟ್ಟಿದ್ದ ಅಂಗಡಿಯಲ್ಲಿ ಅಗ್ನಿ ಅನಾಹುತ ಸಂಭವಿಸಿ, ಬಳಿಕ ಇತರ ಅಂಗಡಿಗಳಿಗೂ ವ್ಯಾಪಿಸಿ ಮೊಬೈಲ್ ಫೋನ್ ಮಾರಾಟ ಮಾಡುವ ಅಂಗಡಿಯೂ ಸೇರಿದಂತೆ ಹಲವು ಅಂಗಡಿಗಳು ಸುಟ್ಟು ಕರಕಲಾಗಿ ಭಾರಿ ನಷ್ಟ ಸಂಭವಿಸಿತ್ತು.</p>.<p>ಬೇಸಿಗೆ ಕಾಲದಲ್ಲಿ ಪದೇ ಪದೇ ಅಗ್ನಿ ಅನಾಹುತಗಳು ಸಂಭವಿಸುತ್ತಿದ್ದರೂ ವಾಣಿಜ್ಯ ಕಟ್ಟಡದವರು, ಅಂಗಡಿಯವರು ಸಮರ್ಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.</p>.<p>21 ಮೀಟರ್ ಅಥವಾ ಅದಕ್ಕಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆ ಕಡ್ಡಾಯವಾಗಿ ಮಾಡಿಕೊಳ್ಳಬೇಕೆಂಬ ನಿಯಮವಿದೆ. ಆದರೆ ಅದಕ್ಕಿಂತ ಸಣ್ಣ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿಲ್ಲ ಎಂಬ ದೂರುಗಳೂ ಕೇಳಿ ಬರುತ್ತಿವೆ.</p>.<p>ಹೆಚ್ಚಿನ ಅಂಗಡಿಗಳಲ್ಲಿ ಅಗ್ನಿ ನಂದಕಗಳು ಕೂಡ ಇರುವುದಿಲ್ಲ. ಇದರಿಂದ ಬೆಂಕಿ ಅವಘಡ ಸಂಭವಿಸಿದಾಗ ಪಕ್ಕನೆ ಅಗ್ನಿ ನಂದಿಸಲು ಸಾಧ್ಯವಾಗದೆ ದೊಡ್ಡ ಅನಾಹುತಗಳು ಸಂಭವಿಸುತ್ತಿವೆ ಎನ್ನುತ್ತವೆ ಮೂಲಗಳು.</p>.<p>ಕೆಲವು ಕಟ್ಟಡಗಳಲ್ಲಿ ಸಮರ್ಪಕ ನೀರಿನ ವ್ಯವಸ್ಥೆಯೂ ಇಲ್ಲದಿರುವುದು ಅಗ್ನಿ ಅನಾಹುತದ ಸಂದರ್ಭಗಳಲ್ಲಿ ಸಮಸ್ಯೆಯಾಗುತ್ತಿದೆ ಎಂದೂ ಹೇಳಿವೆ.</p>.<p>ಜಿಲ್ಲೆಯ ಅಗ್ನಿ ಶಾಮಕ ದಳದಲ್ಲಿ ಜಲವಾಹನಗಳ ಕೊರತೆ ಇರುವುದು ಕೂಡ ಅಗ್ನಿ ಅನಾಹುತ ಸಂಭವಿಸಿದಾಗ ಸಮಸ್ಯೆ ತಂದೊಡ್ಡುತ್ತಿದೆ. ಈಚೆಗೆ ನಗರದ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದಾಗ ಉಡುಪಿ ಘಟಕದ ಎರಡು ಜಲವಾಹನಗಳು ಬೇರೆ ಕಡೆಗೆ ಬೆಂಕಿ ನಂದಿಸಲು ತೆರಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.</p>.<p>‘ಮಣಿಪಾಲದಲ್ಲಿ ಅಗ್ನಿಶಾಮಕ ದಳದ ಹೊಸ ಠಾಣೆಯ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಪಡುಬಿದ್ರಿಯಲ್ಲಿ ಠಾಣೆಯ ಶೇ 80ರಷ್ಟು ಕಾಮಗಾರಿ ಮುಗಿದಿದೆ. ಹೆಬ್ರಿಯಲ್ಲಿ ಜಾಗ ಮಂಜೂರಾಗಿದೆ. ಬ್ರಹ್ಮಾವರದ ಚಾಂತಾರಿನಲ್ಲಿ ಕಟ್ಟಡ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರ ಕಾಮಗಾರಿ ಆರಂಭವಾಗಲಿದೆ. ಶಿರ್ವ ಮತ್ತು ಸಿದ್ಧಾಪುರದಲ್ಲಿ ಹೊಸ ಠಾಣೆ ನಿರ್ಮಾಣಕ್ಕೆ ಜಾಗ ಮಂಜೂರಾಗಿದೆ’ ಎಂದು ಅಗ್ನಿ ಶಾಮಕ ದಳದ ಮೂಲಗಳು ತಿಳಿಸಿವೆ.</p>.<p><strong>ಬಲವರ್ಧನೆಯಾಗಬೇಕಿದೆ ಅಗ್ನಿಶಾಮಕ ದಳ</strong></p><p>ಜಿಲ್ಲೆಯಲ್ಲಿ ಜಲವಾಹನಗಳ ಕೊರತೆ ಇರುವುದರಿಂದ ದೊಡ್ಡ ಅಗ್ನಿ ಅನಾಹುತಗಳು ಸಂಭವಿಸಿದಾಗ ಬೆಂಕಿ ನಂದಿಸಲು ಮಂಗಳೂರು, ಚಿಕ್ಕಮಗಳೂರು ಮೊದಲಾದ ಕಡೆಗಳಿಂದ ಹಾಗೂ ಖಾಸಗಿ ಕಂಪನಿಯ ಜಲವಾಹನಗಳನ್ನು ತರಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.</p><p>15 ವರ್ಷಗಳಿಗಿಂತ ಹಳೆಯದಾದ ವಾಹನಗಳನ್ನು ರಸ್ತೆಗೆ ಇಳಿಸುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಮಾರ್ಗಸೂಚಿ ಜಾರಿಗೆ ಬಂದ ಬಳಿಕ ಜಿಲ್ಲೆಯ ಅಗ್ನಿಶಾಮಕ ಠಾಣೆಗಳಲ್ಲಿ ಹಳೆಯ ಜಲವಾಹನಗಳು ನಿಷ್ಪ್ರಯೋಜಕವಾಗಿವೆ.</p><p>ಜಿಲ್ಲೆಯ ಅಗ್ನಿಶಾಮಕ ದಳದಲ್ಲಿ ಸಿಬ್ಬಂದಿ ಕೊರತೆಯೂ ಕಾಡುತ್ತಿದೆ. ಅಂದಾಜು ಶೇ 40ರಷ್ಟು ಸಿಬ್ಬಂದಿ ಕೊರತೆ ಇದೆ ಎಂದು ಮೂಲಗಳು ತಿಳಿಸಿವೆ.</p>.<p><strong>‘ಏರಿಯಲ್ ಪ್ಲಾಟ್ಫಾರ್ಮ್ ವಾಹನಕ್ಕೆ ಪ್ರಸ್ತಾವ’</strong></p><p>‘ಬಹುಮಹಡಿ ಕಟ್ಟಡಗಳಲ್ಲಿ ಅಗ್ನಿ ದುರಂತ ಸಂಭವಿಸಿದರೆ ಬೆಂಕಿ ನಂದಿಸುವ ಏರಿಯಲ್ ಪ್ಲಾಟ್ಫಾರ್ಮ್ ವಾಹನವು ಉಡುಪಿ ಜಿಲ್ಲೆಯಲ್ಲಿಲ್ಲ. ಇಂತಹ ವಾಹನವನ್ನು ಒದಗಿಸುವಂತೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಉಡುಪಿ ಅಗ್ನಿಶಾಮಕ ಅಧಿಕಾರಿ ವಿನಾಯಕ ಕಲ್ಗುಟ್ಕರ್ ತಿಳಿಸಿದ್ದಾರೆ.</p><p>‘ಏರಿಯಲ್ ಪ್ಲಾಟ್ಫಾರ್ಮ್ ವಾಹನವು ದುಬಾರಿಯಾಗಿದ್ದು, ಅಂತಹ ವಾಹನಗಳನ್ನು ಫಿನ್ಲ್ಯಾಂಡ್ನಲ್ಲಿ ತಯಾರಿಸಲಾಗುತ್ತದೆ. ಬೆಂಗಳೂರು ಮೊದಲಾದ ಮಹಾನಗರಗಳ ಅಗ್ನಿಶಾಮಕ ದಳದಲ್ಲಿ ಆ ವಾಹನವಿದೆ’ ಎಂದು ಅವರು ಹೇಳಿದರು.</p><p>‘ನಗರ ವ್ಯಾಪ್ತಿಯಲ್ಲಿ ದೊಡ್ಡ ಅಗ್ನಿ ಅನಾಹುತಗಳು ಸಂಭವಿಸಿದಾಗ ನೀರಿನ ಕೊರತೆ ಕಾಡುತ್ತದೆ. ಆ ಕಾರಣಕ್ಕೆ ನಗರದ ಪ್ರಮುಖ ಭಾಗಗಳಲ್ಲಿ ನೀರಿನ ಸಂಪರ್ಕ ಕಲ್ಪಿಸುವ ಹೈಡ್ರೆಂಟ್ ಪಾಯಿಂಟ್ಗಳನ್ನು ಸ್ಥಾಪನೆ ಮಾಡಿದರೆ ಅನುಕೂಲವಾಗಲಿದೆ. ಹೈಡ್ರೆಂಟ್ ಸ್ಥಾಪಿಸುವಂತೆ ನಗರಸಭೆಗೆ ಮನವಿ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.</p><p>‘ಹೈಡ್ರೆಂಟ್ ಪಾಯಿಂಟ್ಗಳು ನೀರಿನ ಟ್ಯಾಂಕ್ಗಳಿಗೆ ಜೋಡಣೆಯಾಗಿದ್ದು, ಅದರಿಂದ ಅಗ್ನಿಶಾಮಕ ದಳದ ಜಲವಾಹನಗಳಿಗೆ ನೀರು ಪಡೆಯಲು ಸಾಧ್ಯವಾಗುತ್ತದೆ. ಉಡುಪಿ ನಗರದಲ್ಲಿ ನಾಲ್ಕೈದು ಕಡೆ ಹೈಡ್ರೆಂಟ್ ಪಾಯಿಂಟ್ಗಳನ್ನು ಸ್ಥಾಪಿಸುವ ಅಗತ್ಯವಿದೆ’ ಎಂದು ಅವರು ವಿವರಿಸಿದರು.</p>.<p><strong>ಅಗ್ನಿ ನಂದಕ ಇಟ್ಟುಕೊಳ್ಳಲು ಸೂಚನೆ</strong></p><p>‘ನಗರಸಭೆ ವ್ಯಾಪ್ತಿಯ ಪ್ರತಿ ವಾಣಿಜ್ಯ ಕಟ್ಟಡಗಳಲ್ಲೂ ಅಗ್ನಿ ನಂದಕಗಳನ್ನು ಇಟ್ಟುಕೊಳ್ಳಬೇಕೆಂದು ಸೂಚನೆ ನೀಡಿದ್ದೇವೆ. ಅಂಗಡಿಯವರಿಗೆ ಅಗ್ನಿ ನಂದಕ ಸಾಧನಗಳನ್ನು ಬಳಸುವ ಬಗ್ಗೆ ತರಬೇತಿ ನೀಡುವ ಚಿಂತನೆಯೂ ಇದೆ’ ಎಂದು ಉಡುಪಿ ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ ತಿಳಿಸಿದ್ದಾರೆ.</p><p>‘ರಾಸಾಯನಿಕ ದ್ರವ್ಯಗಳನ್ನು ಸಂಗ್ರಹಿಸಿಡುವ, ಪ್ಲಾಸ್ಟಿಕ್ ಸಾಮಗ್ರಿಗಳನ್ನು ದಾಸ್ತಾನಿರಿಸುವ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆ ಅಂಗಡಿಯವರಿಗೆ ಸೂಚನೆ ನೀಡಿದ್ದೇವೆ’ ಎಂದೂ ಅವರು ಹೇಳಿದರು.</p>.<div><blockquote>ಎಲ್ಲಾ ವಾಣಿಜ್ಯ ಕಟ್ಟಡಗಳಲ್ಲೂ ಅಗ್ನಿ ನಂದಕಗಳನ್ನು ಅಳವಡಿಸಿಕೊಳ್ಳಬೇಕು. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಆಗಾಗ ಪರಿಶೀಲನೆ ನಡೆಸಬೇಕು </blockquote><span class="attribution">ಗಣೇಶ್ರಾಜ್ ಸರಳಬೆಟ್ಟು, ಸಾಮಾಜಿಕ ಕಾರ್ಯಕರ್ತ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-28-1692084549</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>