ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿ – ಕನ್ಯಾಣ ಶೀಘ್ರ ಹಕ್ಕುಪತ್ರ ವಿತರಣೆ: ಜಯಪ್ರಕಾಶ್ ಹೆಗ್ಡೆ ವಿಶ್ವಾಸ

Published 2 ಜೂನ್ 2023, 13:18 IST
Last Updated 2 ಜೂನ್ 2023, 13:18 IST
ಅಕ್ಷರ ಗಾತ್ರ

ಕೋಟ (ಬ್ರಹ್ಮಾವರ): ‘ಬ್ರಹ್ಮಾವರ ತಾಲ್ಲೂಕಿನ ಕೋಡಿ – ಕನ್ಯಾಣ ಭಾಗದ ಜನರ ಹಕ್ಕುಪತ್ರದ ಸಮಸ್ಯೆಗೆ ಮುಕ್ತಿ ದೊರಕಿದ್ದು, ಕೂಡಲೇ ಹಕ್ಕುಪತ್ರವನ್ನು ವಿತರಣೆ ಮಾಡುವ ವಿಶ್ವಾಸ ಹೊಂದಿದ್ದೇವೆ’ ಎಂದು ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಕೋಡಿ ಕನ್ಯಾಣಕ್ಕೆ ಗುರುವಾರ ಆಗಮಿಸಿ ಜನರ ಬಹು ವರ್ಷದ ಬೇಡಿಕೆ ಹಕ್ಕುಪತ್ರ ಕುರಿತು ಸಾರ್ವಜನಿಕರೊಂದಿಗೆ ಮಾತನಾಡಿದರು.

ಬ್ರಹ್ಮಾವರ ವಿಧಾನಸಭಾ ಕ್ಷೇತ್ರ ಇರುವಾಗಲೇ ಈ ಸಮಸ್ಯೆ ಬಗೆಹರಿಸಲು ನಾನು ಮತ್ತು ನಾಡೋಜ ಡಾ. ಜಿ.ಶಂಕರ್ ಪ್ರಯತ್ನಿಸಿದ್ದೇವೆ. ಅದಾದ ನಂತರ ರಾಜಕೀಯ ವಿದ್ಯಾಮಾನದಿಂದ ನಿರಂತರವಾಗಿ ಇಲ್ಲಿನ ಸಾರ್ವಜನಿಕರು ನಮ್ಮ ಸಂಪರ್ಕದಲ್ಲಿದ್ದು, ನಾವುಗಳು ಅವರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೇವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಹಕಾರದಿಂದ ಜನರ ಸಮಸ್ಯೆ ಬಗೆಹರಿಯುವ ಹಂತದಲ್ಲಿದೆ. ಅನಾದಿನ 103 ಪ್ರಕರಣಗಳು ಇತ್ಯರ್ಥಗೊಳ್ಳಲಿದ್ದು, 178 ಪರಂಬೋಕು, ಸಮುದ್ರ ಪ್ರದೇಶ 132 ಪ್ರಕರಣಗಳು ಶೀಘ್ರದಲ್ಲೇ ಸರ್ಕಾರದ ಗಮನ ಸೆಳೆದು ಬಗೆಹರಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸೆಂಟ್ಸ್ ಒಂದಕ್ಕೆ ₹5 ಸಾವಿರ ಮಾನದಂಡ ಕಡಿತಗೊಳಿಸಲು ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಮನವಿ ಮಾಡಿದ ಗ್ರಾಮಸ್ಥರು, ನಗರ ವ್ಯಾಪ್ತಿಗೆ ಸೆಂಟ್ಸ್ ₹600 ಇದ್ದು, ಗ್ರಾಮೀಣ ಭಾಗದಲ್ಲಿ ₹250 ಇದ್ದು, ಅದೇ ಮಾನದಂಡದ ಕೋಡಿಗೂ ಅನ್ವಯಿಸಲಿ. ಜತೆಗೆ ಹಂಗಾರಕಟ್ಟೆ ಅಳಿವೆಯಿಂದ ಕೋಡಿ ಕನ್ಯಾಣ ಭಾಗದ 3 ಕಿ.ಮೀ. ವ್ಯಾಪ್ತಿಯ ಜೆಟ್ಟಿ ಹೂಳೆತ್ತಿ ಅಭಿವೃದ್ಧಿ ಪಡಿಸುವ ಕುರಿತಂತೆ ಪ್ರಸ್ತುತ ಸರ್ಕಾರದ ಗಮನ ಸೆಳೆಯಲು ಮೀನುಗಾರ ಮುಖಂಡರು ಜಯಪ್ರಕಾಶ್ ಹೆಗ್ಡೆ ಅವರಲ್ಲಿ ಮನವಿ ಮಾಡಿದರು. ಈ ಕುರಿತಂತೆ ಬಂದರು ಮತ್ತು ಮೀನುಗಾರಿಕೆ, ಸಣ್ಣ ನೀರಾವರಿ ಇಲಾಖೆ ಸಚಿವರ ಜತೆ ಚರ್ಚೆ ನಡೆಸುತ್ತೇನೆ ಎಂದು ಅವರು ಭರವಸೆ ನೀಡಿದರು.

ಕೋಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ಕೋಡಿ ಮೀನುಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಅಶೋಕ್ ತಿಂಗಳಾಯ, ಕೋಡಿ ಗ್ರಾಮ ಪಂಚಾಯಿತಿ ಸದಸ್ಯ ಅಂತೋನಿ ಡಿ.ಸೋಜ, ಸ್ಥಳೀಯರಾದ ಚಂದ್ರ ಕಾಂಚನ್, ಕೃಷ್ಣಪ್ಪ ಬಂಗೇರ, ಕೃಷ್ಣ ಖಾರ್ವಿ, ಆಶಾ, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT