<p><strong>ಉಡುಪಿ</strong>: ನಗರದ ಕಿನ್ನಿಮುಲ್ಕಿ ಬಳಿಯ ಸರ್ವಿಸ್ ರಸ್ತೆ ಬದಿ ತ್ಯಾಜ್ಯ ಕೊಂಪೆಯಾಗಿ ನಗರದ ಅಂದಗೆಡಿಸುವುದರ ಜೊತೆಗೆ ರೋಗ ಭೀತಿಯನ್ನೂ ಸೃಷ್ಟಿಸಿದೆ.</p>.<p>ಹಲವು ತಿಂಗಳುಗಳಿಂದ ಇಲ್ಲಿ ರಾಶಿ ರಾಶಿ ಕಸ ಎಸೆಯುತ್ತಿದ್ದರು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ</p>.<p>ಕಿನ್ನಿಮುಲ್ಕಿಯಿಂದ ಕರಾವಳಿ ಜಂಕ್ಷನ್ ಕಡೆಗೆ ಹೋಗುವ ಸರ್ವಿಸ್ ರಸ್ತೆಯ ಬದಿಯಲ್ಲಿ ನಿರಂತರ ಕಸ ಎಸೆಯಲಾಗುತ್ತಿದೆ. ಪ್ಲಾಸ್ಟಿಕ್ ಚೀಲದಲ್ಲಿ ಕಸವನ್ನು ತುಂಬಿಸಿ ರಸ್ತೆ ಬದಿಗೆ ಎಸೆಯಲಾಗುತ್ತಿದೆ.</p>.<p>ಕಸ ರಾಶಿ ಬಿದ್ದಿರುವುದರಿಂದ ಪರಿಸರದಲ್ಲಿ ದುರ್ವಾಸನೆ ಹರ ಡಿದ್ದು, ಪಾದಚಾರಿಗಳು ಮೂಗು ಮುಚ್ಚಿಕೊಂಡು ತೆರಳಬೇಕಾಗಿದೆ. ವಾಹನಗಳಲ್ಲಿ ತೆರಳುವವರ ಮೂಗಿಗೆಗೂ ದುರ್ಗಂಧ ಬಡಿಯುತ್ತಿದೆ.</p>.<p>ರಾತ್ರಿ ವೇಳೆಗಳಲ್ಲಿ ವಾಹನಗಳಲ್ಲಿ ತಂದು ಕಸವನ್ನು ಇಲ್ಲಿ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಸ ಎಸೆಯುತ್ತಿರುವ ಪ್ರದೇಶಕ್ಕಿಂತ ಕೆಳಭಾಗದಲ್ಲಿ ಮನೆಗಳಿದ್ದು ಅಲ್ಲಿನ ಜನರು ಸಂಕಷ್ಟ ಅನುಭವಿಸುವಂತಾಗಿದೆ.</p>.<p>ಜೋರಾಗಿ ಮಳೆ ಬಂದರೆ ಈ ಕಸ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಚರಂಡಿಯಲ್ಲಿ ಕಟ್ಟಿ ನಿಲ್ಲುವ ಸಾಧ್ಯತೆಯೂ ಇದೆ ಎಂದು ಜನರು ಹೇಳುತ್ತಾರೆ.</p>.<p>ಸ್ವಾಗತ ಗೋಪುರದ ಬಳಿಯ ಸರ್ವಿಸ್ ರಸ್ತೆಯ ಬದಿಯಲ್ಲಿ ಕಸದ ರಾಶಿ ತುಂಬಿದ್ದರೆ. ಅಲ್ಲಿಂದ ಮುಂದೆ ರಸ್ತೆ ಬದಿಯ ಗಿಡ ಗಂಟೆಗಳ ನಡುವೆಯೂ ರಾಶಿ ರಾಶಿ ಕಸ ಎಸೆಯಲಾಗಿದೆ.</p>.<p>ಕಸ ಎಸೆಯುತ್ತಿರುವ ಪ್ರದೇಶದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಾಪಿಸಿ, ಕಸ ಎಸೆಯುವವರಿಗೆ ದಂಡ ವಿಧಿಸಬೇಕೆಂದು ಜನರು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ದೂರಿದ್ದಾರೆ .</p>.<p>ಇದೇ ಸರ್ವಿಸ್ ರಸ್ತೆಯ ಬದಿಯ ಚರಂಡಿಯ ಸ್ಲಾಬ್ ಕಿತ್ತು ಹೋಗಿರುವ ಜಾಗದಲ್ಲಿ ಚರಂಡಿ ಒಳಗೆ ರಾಶಿ ರಾಶಿ ಕಸವನ್ನು ತುಂಬಿಸಲಾಗಿದೆ.</p>.<p>ಚರಂಡಿಯಲ್ಲಿ ಕಸ ತುಂಬಿರುವ ಕಾರಣ ಮಳೆ ನೀರು ಹರಿಯದೆ ರಸ್ತೆಯಲ್ಲಿ ಹರಿಯುವ ಸಾಧ್ಯತೆ ಇದೆ ಎಂದು ಜನರು ಹೇಳಿದ್ದಾರೆ. ಅಂಗಡಿ, ಹೋಟೆಲ್ನವರು ಕೂಡ ಇಲ್ಲಿ ಕಸ ತಂದು ಎಸೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.</p>.<p>ಕಸ ರಾಶಿ ಬಿದ್ದಿರುವುದರಿಂದ ಅದರಲ್ಲಿರುವ ಆಹಾರ ಪದಾರ್ಥಗಳನ್ನು ತಿನ್ನಲು ಬೀದಿನಾಯಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತವೆ ಅದರಿಂದ ಪಾದಾಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದೂ ದೂರಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-28-1956387731</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ</strong>: ನಗರದ ಕಿನ್ನಿಮುಲ್ಕಿ ಬಳಿಯ ಸರ್ವಿಸ್ ರಸ್ತೆ ಬದಿ ತ್ಯಾಜ್ಯ ಕೊಂಪೆಯಾಗಿ ನಗರದ ಅಂದಗೆಡಿಸುವುದರ ಜೊತೆಗೆ ರೋಗ ಭೀತಿಯನ್ನೂ ಸೃಷ್ಟಿಸಿದೆ.</p>.<p>ಹಲವು ತಿಂಗಳುಗಳಿಂದ ಇಲ್ಲಿ ರಾಶಿ ರಾಶಿ ಕಸ ಎಸೆಯುತ್ತಿದ್ದರು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ</p>.<p>ಕಿನ್ನಿಮುಲ್ಕಿಯಿಂದ ಕರಾವಳಿ ಜಂಕ್ಷನ್ ಕಡೆಗೆ ಹೋಗುವ ಸರ್ವಿಸ್ ರಸ್ತೆಯ ಬದಿಯಲ್ಲಿ ನಿರಂತರ ಕಸ ಎಸೆಯಲಾಗುತ್ತಿದೆ. ಪ್ಲಾಸ್ಟಿಕ್ ಚೀಲದಲ್ಲಿ ಕಸವನ್ನು ತುಂಬಿಸಿ ರಸ್ತೆ ಬದಿಗೆ ಎಸೆಯಲಾಗುತ್ತಿದೆ.</p>.<p>ಕಸ ರಾಶಿ ಬಿದ್ದಿರುವುದರಿಂದ ಪರಿಸರದಲ್ಲಿ ದುರ್ವಾಸನೆ ಹರ ಡಿದ್ದು, ಪಾದಚಾರಿಗಳು ಮೂಗು ಮುಚ್ಚಿಕೊಂಡು ತೆರಳಬೇಕಾಗಿದೆ. ವಾಹನಗಳಲ್ಲಿ ತೆರಳುವವರ ಮೂಗಿಗೆಗೂ ದುರ್ಗಂಧ ಬಡಿಯುತ್ತಿದೆ.</p>.<p>ರಾತ್ರಿ ವೇಳೆಗಳಲ್ಲಿ ವಾಹನಗಳಲ್ಲಿ ತಂದು ಕಸವನ್ನು ಇಲ್ಲಿ ಎಸೆಯಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಸ ಎಸೆಯುತ್ತಿರುವ ಪ್ರದೇಶಕ್ಕಿಂತ ಕೆಳಭಾಗದಲ್ಲಿ ಮನೆಗಳಿದ್ದು ಅಲ್ಲಿನ ಜನರು ಸಂಕಷ್ಟ ಅನುಭವಿಸುವಂತಾಗಿದೆ.</p>.<p>ಜೋರಾಗಿ ಮಳೆ ಬಂದರೆ ಈ ಕಸ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಚರಂಡಿಯಲ್ಲಿ ಕಟ್ಟಿ ನಿಲ್ಲುವ ಸಾಧ್ಯತೆಯೂ ಇದೆ ಎಂದು ಜನರು ಹೇಳುತ್ತಾರೆ.</p>.<p>ಸ್ವಾಗತ ಗೋಪುರದ ಬಳಿಯ ಸರ್ವಿಸ್ ರಸ್ತೆಯ ಬದಿಯಲ್ಲಿ ಕಸದ ರಾಶಿ ತುಂಬಿದ್ದರೆ. ಅಲ್ಲಿಂದ ಮುಂದೆ ರಸ್ತೆ ಬದಿಯ ಗಿಡ ಗಂಟೆಗಳ ನಡುವೆಯೂ ರಾಶಿ ರಾಶಿ ಕಸ ಎಸೆಯಲಾಗಿದೆ.</p>.<p>ಕಸ ಎಸೆಯುತ್ತಿರುವ ಪ್ರದೇಶದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಸ್ಥಾಪಿಸಿ, ಕಸ ಎಸೆಯುವವರಿಗೆ ದಂಡ ವಿಧಿಸಬೇಕೆಂದು ಜನರು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಇನ್ನೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ದೂರಿದ್ದಾರೆ .</p>.<p>ಇದೇ ಸರ್ವಿಸ್ ರಸ್ತೆಯ ಬದಿಯ ಚರಂಡಿಯ ಸ್ಲಾಬ್ ಕಿತ್ತು ಹೋಗಿರುವ ಜಾಗದಲ್ಲಿ ಚರಂಡಿ ಒಳಗೆ ರಾಶಿ ರಾಶಿ ಕಸವನ್ನು ತುಂಬಿಸಲಾಗಿದೆ.</p>.<p>ಚರಂಡಿಯಲ್ಲಿ ಕಸ ತುಂಬಿರುವ ಕಾರಣ ಮಳೆ ನೀರು ಹರಿಯದೆ ರಸ್ತೆಯಲ್ಲಿ ಹರಿಯುವ ಸಾಧ್ಯತೆ ಇದೆ ಎಂದು ಜನರು ಹೇಳಿದ್ದಾರೆ. ಅಂಗಡಿ, ಹೋಟೆಲ್ನವರು ಕೂಡ ಇಲ್ಲಿ ಕಸ ತಂದು ಎಸೆಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.</p>.<p>ಕಸ ರಾಶಿ ಬಿದ್ದಿರುವುದರಿಂದ ಅದರಲ್ಲಿರುವ ಆಹಾರ ಪದಾರ್ಥಗಳನ್ನು ತಿನ್ನಲು ಬೀದಿನಾಯಿಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತವೆ ಅದರಿಂದ ಪಾದಾಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದೂ ದೂರಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260525-28-1956387731</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>