<p><strong>ಉಡುಪಿ:</strong> ಏಪ್ರಿಲ್ ತಿಂಗಳು ಆರಂಭವಾಗುತ್ತಿದ್ದಂತೆ ಉಡುಪಿಯ ಮಾರುಕಟ್ಟೆಗೂ ಬಗೆ ಬಗೆಯ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದ್ದು, ಖರೀದಿ ಜೋರಾಗಿದೆ.</p>.<p>ರಸಪೂರಿ, ಬಂಗನಪಳ್ಳಿ, ಮಲಬಾರ್ ಮಾವು, ಕಲಪಾಡಿ, ಬಾದಾಮಿ, ಸಿಂಧೂರ, ಮೊದಲಾದ ತಳಿಯ ಮಾವಿನ ಹಣ್ಣುಗಳು ನಗರಕ್ಕೆ ಈಗಾಗಲೇ ಮಾರಾಟಕ್ಕೆ ತಲುಪಿವೆ.</p>.<p>ಪ್ರತಿ ವರ್ಷವೂ ಬೆಳಗಾವಿ, ಕೋಲಾರ, ಕುಮಟಾ, ಚಿಕ್ಕಬಳ್ಳಾಪುರ ಅಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಮಾವಿನ ಹಣ್ಣುಗಳು ಉಡುಪಿಗೆ ಮಾರಾಟಕ್ಕೆ ಬರುತ್ತವೆ.</p>.<p>ಈ ಬಾರಿ ಮಾವಿನ ಹಣ್ಣುಗಳು ತಡವಾಗಿ ಮಾರುಕಟ್ಟೆ ಪ್ರವೇಶಿಸಿವೆ. ಆಂಧ್ರಪ್ರದೇಶ, ತಮಿಳುನಾಡು ಮೊದಲಾದವಡೆಗಳಿಂದ ಇನ್ನೂ ಕೆಲವು ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿಲ್ಲ ಎಂದು ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ.</p>.<p>‘ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಮಾವಿನ ಹಣ್ಣಿನ ಮಾರಾಟ ಜೋರಾಗಿರುತ್ತದೆ, ಮಳೆ ಬರುತ್ತಿದ್ದಂತೆ ಬೇಡಿಕೆ ಕುಸಿಯುತ್ತದೆ. ಕಳೆದ ವರ್ಷ ಮೇ ಮೊದಲ ವಾರದಲ್ಲಿ ಮಳೆ ಆರಂಭವಾದ ಕಾರಣ ಮಾವಿನ ಹಣ್ಣುಗಳ ಮಾರಾಟ ತೀವ್ರವಾಗಿ ಕುಸಿದಿತ್ತು’ ಎಂದು ಉಡುಪಿಯ ಹಣ್ಣಿನ ಮಾರಾಟಗಾರ ಬಶೀರ್ ತಿಳಿಸಿದರು.</p>.<p>‘ಬೇಡಿಕೆಗೆ ಅನುಗು ಣವಾಗಿ ಪೂರೈಕೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಅವರು.</p>.<p>‘ನೆಕ್ಕರೆ ಬಿಟ್ಟರೆ ಸ್ಥಳೀಯ ತಳಿಯ ಮಾವಿನ ಹಣ್ಣುಗಳು ಈ ಬಾರಿ ಕಡಿಮೆ ಪ್ರಮಾಣದಲ್ಲಿ ಬಂದಿವೆ. ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಮರದ ಹೂಗಳು ಉದುರಿ ಹೋಗಿರುವುದರಿಂದ ಇಳುವರಿ ಕುಸಿತವಾಗಿದೆ’ ಎಂದೂ ಅವರು ವಿವರಿಸಿದರು.</p>.<p>‘ಜಿಲ್ಲೆಯಲ್ಲಿ ಮಾತ್ರವಲ್ಲಿ ಮಾವು ಬೆಳೆಯುವ ಇತರ ಪ್ರದೇಶಗಳಲ್ಲೂ ಈ ಬಾರಿ ಅತಿಯಾದ ಬಿಸಿಲಿನಿಂದಾಗಿ ಮಾವಿನ ಹೂವುಗಳಿಗೆ ಹಾನಿಯಾಗಿ ಇಳುವರಿ ತೀರಾ ಕುಸಿದಿದೆ. ಆ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿಲ್ಲ’ ಎಂದೂ ಅವರು ಹೇಳಿದರು.</p>.<p>‘ಮಾವಿನಹಣ್ಣಿನ ಜ್ಯೂಸ್ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಜ್ಯೂಸ್ ಅಂಗಡಿಯವರು ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣನ್ನು ಖರೀದಿಸುತ್ತಾರೆ. ಅಲ್ಲದೆ ಮಾವಿನ ರಸಾಯನ ಮಾಡಲು ಕೆಲವರು ಮಾವಿನ ಹಣ್ಣನ್ನು ಕೊಂಡು ಹೋಗುತ್ತಾರೆ’ ಎಂದು ಅವರು ತಿಳಿಸಿದರು.</p>.<p><strong>ಇಳಿಕೆಯಾಗದ ಹಣ್ಣಿನ ದರ</strong></p><p>ರಂಜಾನ್ ತಿಂಗಳಲ್ಲಿ ಏರಿಕೆಯಾಗಿದ್ದ ಹಣ್ಣಿನ ದರವು ಇನ್ನೂ ಇಳಿಕೆಯಾಗಿಲ್ಲ. ಕೆ.ಜಿ. ದಾಳಿಂಬೆ ಹಣ್ಣಿನ ದರವು ಇನ್ನೂ ₹220ರ ಅಸುಹಾಸಿನಲ್ಲೇ ಇದೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆ ಕೆ.ಜಿ.ಗೆ * 90 ಹಾಗೂ ನೇಂದ್ರ ಬಾಳೆ ಹಣ್ಣಿನ ದರವು ಕೆ.ಜಿ.ಗೆ ₹70 ಇದೆ. ಸೇಬು ಹಣ್ಣಿನ ದರ ಕೆ.ಜಿ.ಗೆ ₹230, ಕಲ್ಲಂಗಡಿ ಹಣ್ಣಿನ ದರ ಕೆ.ಜಿ.ಗೆ ₹ 40ರ ಗಡಿ ದಾಟಿದೆ. ದ್ರಾಕ್ಷಿ ದರವು ಕೆ.ಜಿ.ಗೆ 140ರ ಅಸುಪಾಸಿನಲ್ಲೇ ಇದೆ.</p><p>ಸಾಮಾನ್ಯವಾಗಿ ರಂಜಾನ್ ತಿಂಗಳು ಕಳೆದ ಮೇಲೆ ಹಣ್ಣುಗಳ ದರವು ಅಲ್ಪ ಇಳಿಕೆಯಾಗುತ್ತದೆ. ಆದರೆ ಈ ಬಾರಿ ಇಳಿಕೆಯಾಗುವುದರ ಬದಲಿಗೆ ಇನ್ನಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಏಪ್ರಿಲ್ ತಿಂಗಳು ಆರಂಭವಾಗುತ್ತಿದ್ದಂತೆ ಉಡುಪಿಯ ಮಾರುಕಟ್ಟೆಗೂ ಬಗೆ ಬಗೆಯ ಮಾವಿನ ಹಣ್ಣುಗಳು ಲಗ್ಗೆ ಇಟ್ಟಿದ್ದು, ಖರೀದಿ ಜೋರಾಗಿದೆ.</p>.<p>ರಸಪೂರಿ, ಬಂಗನಪಳ್ಳಿ, ಮಲಬಾರ್ ಮಾವು, ಕಲಪಾಡಿ, ಬಾದಾಮಿ, ಸಿಂಧೂರ, ಮೊದಲಾದ ತಳಿಯ ಮಾವಿನ ಹಣ್ಣುಗಳು ನಗರಕ್ಕೆ ಈಗಾಗಲೇ ಮಾರಾಟಕ್ಕೆ ತಲುಪಿವೆ.</p>.<p>ಪ್ರತಿ ವರ್ಷವೂ ಬೆಳಗಾವಿ, ಕೋಲಾರ, ಕುಮಟಾ, ಚಿಕ್ಕಬಳ್ಳಾಪುರ ಅಲ್ಲದೆ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡಿನಿಂದಲೂ ಮಾವಿನ ಹಣ್ಣುಗಳು ಉಡುಪಿಗೆ ಮಾರಾಟಕ್ಕೆ ಬರುತ್ತವೆ.</p>.<p>ಈ ಬಾರಿ ಮಾವಿನ ಹಣ್ಣುಗಳು ತಡವಾಗಿ ಮಾರುಕಟ್ಟೆ ಪ್ರವೇಶಿಸಿವೆ. ಆಂಧ್ರಪ್ರದೇಶ, ತಮಿಳುನಾಡು ಮೊದಲಾದವಡೆಗಳಿಂದ ಇನ್ನೂ ಕೆಲವು ತಳಿಯ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿಲ್ಲ ಎಂದು ಹಣ್ಣಿನ ವ್ಯಾಪಾರಿಗಳು ತಿಳಿಸಿದ್ದಾರೆ.</p>.<p>‘ಸಾಮಾನ್ಯವಾಗಿ ಏಪ್ರಿಲ್, ಮೇ ತಿಂಗಳಲ್ಲಿ ಮಾವಿನ ಹಣ್ಣಿನ ಮಾರಾಟ ಜೋರಾಗಿರುತ್ತದೆ, ಮಳೆ ಬರುತ್ತಿದ್ದಂತೆ ಬೇಡಿಕೆ ಕುಸಿಯುತ್ತದೆ. ಕಳೆದ ವರ್ಷ ಮೇ ಮೊದಲ ವಾರದಲ್ಲಿ ಮಳೆ ಆರಂಭವಾದ ಕಾರಣ ಮಾವಿನ ಹಣ್ಣುಗಳ ಮಾರಾಟ ತೀವ್ರವಾಗಿ ಕುಸಿದಿತ್ತು’ ಎಂದು ಉಡುಪಿಯ ಹಣ್ಣಿನ ಮಾರಾಟಗಾರ ಬಶೀರ್ ತಿಳಿಸಿದರು.</p>.<p>‘ಬೇಡಿಕೆಗೆ ಅನುಗು ಣವಾಗಿ ಪೂರೈಕೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಅವರು.</p>.<p>‘ನೆಕ್ಕರೆ ಬಿಟ್ಟರೆ ಸ್ಥಳೀಯ ತಳಿಯ ಮಾವಿನ ಹಣ್ಣುಗಳು ಈ ಬಾರಿ ಕಡಿಮೆ ಪ್ರಮಾಣದಲ್ಲಿ ಬಂದಿವೆ. ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಮರದ ಹೂಗಳು ಉದುರಿ ಹೋಗಿರುವುದರಿಂದ ಇಳುವರಿ ಕುಸಿತವಾಗಿದೆ’ ಎಂದೂ ಅವರು ವಿವರಿಸಿದರು.</p>.<p>‘ಜಿಲ್ಲೆಯಲ್ಲಿ ಮಾತ್ರವಲ್ಲಿ ಮಾವು ಬೆಳೆಯುವ ಇತರ ಪ್ರದೇಶಗಳಲ್ಲೂ ಈ ಬಾರಿ ಅತಿಯಾದ ಬಿಸಿಲಿನಿಂದಾಗಿ ಮಾವಿನ ಹೂವುಗಳಿಗೆ ಹಾನಿಯಾಗಿ ಇಳುವರಿ ತೀರಾ ಕುಸಿದಿದೆ. ಆ ಕಾರಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣುಗಳು ಮಾರಾಟಕ್ಕೆ ಬಂದಿಲ್ಲ’ ಎಂದೂ ಅವರು ಹೇಳಿದರು.</p>.<p>‘ಮಾವಿನಹಣ್ಣಿನ ಜ್ಯೂಸ್ಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಜ್ಯೂಸ್ ಅಂಗಡಿಯವರು ಹೆಚ್ಚಿನ ಪ್ರಮಾಣದಲ್ಲಿ ಮಾವಿನ ಹಣ್ಣನ್ನು ಖರೀದಿಸುತ್ತಾರೆ. ಅಲ್ಲದೆ ಮಾವಿನ ರಸಾಯನ ಮಾಡಲು ಕೆಲವರು ಮಾವಿನ ಹಣ್ಣನ್ನು ಕೊಂಡು ಹೋಗುತ್ತಾರೆ’ ಎಂದು ಅವರು ತಿಳಿಸಿದರು.</p>.<p><strong>ಇಳಿಕೆಯಾಗದ ಹಣ್ಣಿನ ದರ</strong></p><p>ರಂಜಾನ್ ತಿಂಗಳಲ್ಲಿ ಏರಿಕೆಯಾಗಿದ್ದ ಹಣ್ಣಿನ ದರವು ಇನ್ನೂ ಇಳಿಕೆಯಾಗಿಲ್ಲ. ಕೆ.ಜಿ. ದಾಳಿಂಬೆ ಹಣ್ಣಿನ ದರವು ಇನ್ನೂ ₹220ರ ಅಸುಹಾಸಿನಲ್ಲೇ ಇದೆ. ಏಲಕ್ಕಿ ಬಾಳೆ ಹಣ್ಣಿನ ಬೆಲೆ ಕೆ.ಜಿ.ಗೆ * 90 ಹಾಗೂ ನೇಂದ್ರ ಬಾಳೆ ಹಣ್ಣಿನ ದರವು ಕೆ.ಜಿ.ಗೆ ₹70 ಇದೆ. ಸೇಬು ಹಣ್ಣಿನ ದರ ಕೆ.ಜಿ.ಗೆ ₹230, ಕಲ್ಲಂಗಡಿ ಹಣ್ಣಿನ ದರ ಕೆ.ಜಿ.ಗೆ ₹ 40ರ ಗಡಿ ದಾಟಿದೆ. ದ್ರಾಕ್ಷಿ ದರವು ಕೆ.ಜಿ.ಗೆ 140ರ ಅಸುಪಾಸಿನಲ್ಲೇ ಇದೆ.</p><p>ಸಾಮಾನ್ಯವಾಗಿ ರಂಜಾನ್ ತಿಂಗಳು ಕಳೆದ ಮೇಲೆ ಹಣ್ಣುಗಳ ದರವು ಅಲ್ಪ ಇಳಿಕೆಯಾಗುತ್ತದೆ. ಆದರೆ ಈ ಬಾರಿ ಇಳಿಕೆಯಾಗುವುದರ ಬದಲಿಗೆ ಇನ್ನಷ್ಟು ಏರಿಕೆಯಾಗಿದೆ ಎನ್ನುತ್ತಾರೆ ಗ್ರಾಹಕರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>