<p><strong>ಉಡುಪಿ:</strong> ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಪಡೆಯಬಹುದಾದ ಅಣಬೆ ಕೃಷಿಯತ್ತ ಕರಾವಳಿ ಜಿಲ್ಲೆಯಾದ ಉಡುಪಿಯಲ್ಲೂ ಹಲವರು ಆಸಕ್ತಿ ತೋರುತ್ತಿದ್ದರೂ ಇಲ್ಲಿ ಹವಾಮಾನವೇ ದೊಡ್ಡ ಸವಾಲಾಗಿ ಕಾಡುತ್ತಿದೆ.</p>.<p>ಜಿಲ್ಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಅಣಬೆ ಕೃಷಿಕರಿದ್ದಾರೆ. ಆಯಿಸ್ಟರ್ ತಳಿಯ ಅಣಬೆಯನ್ನೇ ಹೆಚ್ಚಿನವರು ಬೆಳೆಯುತ್ತಿದ್ದು, ಈ ಅಣಬೆ ಬೆಳೆಗೆ ತಾಪಮಾನ ಏರಿಕೆಯು ಮಾರಕವಾಗಿ ಪರಿಣಮಿಸುತ್ತಿದೆ.</p>.<p>ಕರಾವಳಿಯಲ್ಲಿ ಫೆಬ್ರುವರಿ ತಿಂಗಳಿನಿಂದಲೇ ಬಿಸಿಲಿನ ಬೇಗೆ ಹೆಚ್ಚಾಗುವುದರ ಜೊತೆಗೆ ತಾಪಮಾನವೂ ಏರಿಕೆಯಾಗಲು ಆರಂಭವಾಗುತ್ತದೆ. ಈ ಕಾರಣಕ್ಕೆ ಏಪ್ರಿಲ್, ಮೇ ತಿಂಗಳಲ್ಲಿ ಅಣಬೆ ಬೆಳೆಗಾರರು ಅಣಬೆ ಕೃಷಿಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಮತ್ತೆ ಮಳೆ ಬಂದು ತಾಪಮಾನ ಕಡಿಮೆಯಾದ ಬಳಿಕವೇ ಬೆಳೆ ಪ್ರಾರಂಭಿಸುತ್ತಾರೆ.</p>.<p>ಮೈಸೂರು, ಬೆಂಗಳೂರು ಮೊದಲಾದೆಡೆ ತಾಪಮಾನ ಕಡಿಮೆ ಇರುತ್ತದೆ. ಆ ಕಾರಣಕ್ಕೆ ಅಲ್ಲಿ ವರ್ಷವಿಡೀ ಅಣಬೆ ಬೆಳೆಯಬಹುದು ಆದರೆ ಕರಾವಳಿಯಲ್ಲಿ ಕೆಲವು ಮಿತಿಗಳಿವೆ ಎನ್ನುತ್ತಾರೆ ಅಣಬೆ ಬೆಳೆಗಾರರು.</p>.<p>ಹೋಟೆಲ್ಗಳಲ್ಲಿ ಅಣಬೆಯ ಖಾದ್ಯಗಳಿಗೆ ಬೇಡಿಕೆ ಕುದುರುತ್ತಿದ್ದರೂ ಉಡುಪಿಯಲ್ಲಿ ಅಣಬೆ ಬೆಳೆಯುವವರಿಗೆ ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಹೆಚ್ಚಿನವರು ತಾವು ಬೆಳೆದ ಅಣಬೆಯನ್ನು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಾರೆ.</p>.<p>ಜಿಲ್ಲೆಯ ಅಣಬೆ ಬೆಳೆಗಾರರು ಮೈಸೂರು, ಬೆಂಗಳೂರು ಮೊದಲಾದೆಡೆಗಳಿಂದ ಅಣಬೆಯ ಬೀಜಗಳನ್ನು ತರಿಸಿ ಕೃಷಿ ಮಾಡುತ್ತಾರೆ. ಅಣಬೆ ಬೀಜ ಕೆ.ಜಿ.ಗೆ ₹100ರಿಂದ ₹120 ಇದೆ ಎನ್ನುತ್ತಾರೆ ಬೆಳೆಗಾರರು.</p>.<p>‘ಒಂದು ಕೆ.ಜಿ. ಬೀಜದಿಂದ ಸುಮಾರು ಐದು ಕೆ.ಜಿ.ಯಷ್ಟು ಅಣಬೆ ಇಳುವರಿ ಪಡೆಯಬಹುದು. ಸದ್ಯ ಕೆ.ಜಿ. ಅಣಬೆಗೆ ₹250 ರಿಂದ ₹300 ದರವಿದೆ’ ಎಂದು ಮಾರಣಕಟ್ಟೆಯ ಅಣಬೆ ಬೆಳೆಗಾರ ರತ್ನಾಕರ್ ನಾಯ್ಕ್ ತಿಳಿಸಿದರು.</p>.<p>‘ಒಮ್ಮೆ ಅಣಬೆ ಬೀಜ ಹಾಕಿದರೆ ಮೂರು ಸಲ ಕೊಯ್ಲು ಸಿಗುತ್ತದೆ. ಬೇಡಿಕೆಗೆ ಅನುಗುಣವಾಗಿ ನಾವು ಅಣಬೆ ಬೆಳೆಯುತ್ತೇವೆ. ಕೊಯ್ಲಿನ ಬಳಿಕ ಆ ಅಣಬೆಯನ್ನು ಹೆಚ್ಚು ದಿನ ಇರಿಸಲು ಆಗುವುದಿಲ್ಲ. ಇದು ಕೂಡ ಸವಾಲಾಗಿ ಕಾಡುತ್ತದೆ’ ಎಂದೂ ಅವರು ತಿಳಿಸಿದರು.</p>.<p>‘ಜಿಲ್ಲೆಯಲ್ಲಿ ಅಣಬೆ ಬೆಳೆಯುವವರು ಶಿವಮೊಗ್ಗದಲ್ಲಿ ತರಬೇತಿ ಪಡೆಯುತ್ತಾರೆ. ಕೆಲವರು ಯೂಟ್ಯೂಬ್ ನೋಡಿಯೂ ಅಣಬೆ ಕೃಷಿ ಮಾಡಿದ್ದಾರೆ’ ಎಂದರು.</p>.<p>‘ವಾತಾವರಣದ ಬದಲಾವಣೆಗೆ ಪೂರಕವಾಗಿ ಅಣಬೆ ತಳಿಗಳನ್ನು ಬದಲಿಸಿ ಬೆಳೆಯುವ ಮೂಲಕ ಲಾಭ ಪಡೆಯಬಹುದು. ಮಿಲ್ಕಿ ತಳಿಯ ಅಣಬೆಗೆ ಹೋಟೆಲ್ಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಆ ತಳಿಯನ್ನು ಬೆಳೆದರೆ ಮಾರುಕಟ್ಟೆ ಸಮಸ್ಯೆಯೂ ಹೆಚ್ಚಾಗಿ ಕಾಡದು’ ಎನ್ನುತ್ತಾರೆ ಉಚ್ಚಿಲದ ಅಣಬೆ ಕೃಷಿ ತರಬೇತುದಾರೆ ಸುಶೀಲಾ.</p>.<div><blockquote>ಅಡಿಕೆ, ಭತ್ತ ಮೊದಲಾದ ಕೃಷಿಯನ್ನು ಮಾಡುವವರು ಉಪ ಕಸುಬಾಗಿ ಅಣಬೆ ಬೆಳೆಯಬಹುದು. ಹೆಚ್ಚು ಶ್ರಮ ಹಾಕಿದರೆ ಉತ್ತಮ ಲಾಭ ಪಡೆಯಬಹುದು </blockquote><span class="attribution">ರತ್ನಾಕರ, ಅಣಬೆ ಬೆಳೆಗಾರ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-28-105978654</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಕಡಿಮೆ ಬಂಡವಾಳ ಹಾಕಿ ಹೆಚ್ಚು ಲಾಭ ಪಡೆಯಬಹುದಾದ ಅಣಬೆ ಕೃಷಿಯತ್ತ ಕರಾವಳಿ ಜಿಲ್ಲೆಯಾದ ಉಡುಪಿಯಲ್ಲೂ ಹಲವರು ಆಸಕ್ತಿ ತೋರುತ್ತಿದ್ದರೂ ಇಲ್ಲಿ ಹವಾಮಾನವೇ ದೊಡ್ಡ ಸವಾಲಾಗಿ ಕಾಡುತ್ತಿದೆ.</p>.<p>ಜಿಲ್ಲೆಯಲ್ಲಿ ಮೂವತ್ತಕ್ಕೂ ಹೆಚ್ಚು ಅಣಬೆ ಕೃಷಿಕರಿದ್ದಾರೆ. ಆಯಿಸ್ಟರ್ ತಳಿಯ ಅಣಬೆಯನ್ನೇ ಹೆಚ್ಚಿನವರು ಬೆಳೆಯುತ್ತಿದ್ದು, ಈ ಅಣಬೆ ಬೆಳೆಗೆ ತಾಪಮಾನ ಏರಿಕೆಯು ಮಾರಕವಾಗಿ ಪರಿಣಮಿಸುತ್ತಿದೆ.</p>.<p>ಕರಾವಳಿಯಲ್ಲಿ ಫೆಬ್ರುವರಿ ತಿಂಗಳಿನಿಂದಲೇ ಬಿಸಿಲಿನ ಬೇಗೆ ಹೆಚ್ಚಾಗುವುದರ ಜೊತೆಗೆ ತಾಪಮಾನವೂ ಏರಿಕೆಯಾಗಲು ಆರಂಭವಾಗುತ್ತದೆ. ಈ ಕಾರಣಕ್ಕೆ ಏಪ್ರಿಲ್, ಮೇ ತಿಂಗಳಲ್ಲಿ ಅಣಬೆ ಬೆಳೆಗಾರರು ಅಣಬೆ ಕೃಷಿಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತಾರೆ. ಮತ್ತೆ ಮಳೆ ಬಂದು ತಾಪಮಾನ ಕಡಿಮೆಯಾದ ಬಳಿಕವೇ ಬೆಳೆ ಪ್ರಾರಂಭಿಸುತ್ತಾರೆ.</p>.<p>ಮೈಸೂರು, ಬೆಂಗಳೂರು ಮೊದಲಾದೆಡೆ ತಾಪಮಾನ ಕಡಿಮೆ ಇರುತ್ತದೆ. ಆ ಕಾರಣಕ್ಕೆ ಅಲ್ಲಿ ವರ್ಷವಿಡೀ ಅಣಬೆ ಬೆಳೆಯಬಹುದು ಆದರೆ ಕರಾವಳಿಯಲ್ಲಿ ಕೆಲವು ಮಿತಿಗಳಿವೆ ಎನ್ನುತ್ತಾರೆ ಅಣಬೆ ಬೆಳೆಗಾರರು.</p>.<p>ಹೋಟೆಲ್ಗಳಲ್ಲಿ ಅಣಬೆಯ ಖಾದ್ಯಗಳಿಗೆ ಬೇಡಿಕೆ ಕುದುರುತ್ತಿದ್ದರೂ ಉಡುಪಿಯಲ್ಲಿ ಅಣಬೆ ಬೆಳೆಯುವವರಿಗೆ ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಹೆಚ್ಚಿನವರು ತಾವು ಬೆಳೆದ ಅಣಬೆಯನ್ನು ಸ್ಥಳೀಯವಾಗಿಯೇ ಮಾರಾಟ ಮಾಡುತ್ತಾರೆ.</p>.<p>ಜಿಲ್ಲೆಯ ಅಣಬೆ ಬೆಳೆಗಾರರು ಮೈಸೂರು, ಬೆಂಗಳೂರು ಮೊದಲಾದೆಡೆಗಳಿಂದ ಅಣಬೆಯ ಬೀಜಗಳನ್ನು ತರಿಸಿ ಕೃಷಿ ಮಾಡುತ್ತಾರೆ. ಅಣಬೆ ಬೀಜ ಕೆ.ಜಿ.ಗೆ ₹100ರಿಂದ ₹120 ಇದೆ ಎನ್ನುತ್ತಾರೆ ಬೆಳೆಗಾರರು.</p>.<p>‘ಒಂದು ಕೆ.ಜಿ. ಬೀಜದಿಂದ ಸುಮಾರು ಐದು ಕೆ.ಜಿ.ಯಷ್ಟು ಅಣಬೆ ಇಳುವರಿ ಪಡೆಯಬಹುದು. ಸದ್ಯ ಕೆ.ಜಿ. ಅಣಬೆಗೆ ₹250 ರಿಂದ ₹300 ದರವಿದೆ’ ಎಂದು ಮಾರಣಕಟ್ಟೆಯ ಅಣಬೆ ಬೆಳೆಗಾರ ರತ್ನಾಕರ್ ನಾಯ್ಕ್ ತಿಳಿಸಿದರು.</p>.<p>‘ಒಮ್ಮೆ ಅಣಬೆ ಬೀಜ ಹಾಕಿದರೆ ಮೂರು ಸಲ ಕೊಯ್ಲು ಸಿಗುತ್ತದೆ. ಬೇಡಿಕೆಗೆ ಅನುಗುಣವಾಗಿ ನಾವು ಅಣಬೆ ಬೆಳೆಯುತ್ತೇವೆ. ಕೊಯ್ಲಿನ ಬಳಿಕ ಆ ಅಣಬೆಯನ್ನು ಹೆಚ್ಚು ದಿನ ಇರಿಸಲು ಆಗುವುದಿಲ್ಲ. ಇದು ಕೂಡ ಸವಾಲಾಗಿ ಕಾಡುತ್ತದೆ’ ಎಂದೂ ಅವರು ತಿಳಿಸಿದರು.</p>.<p>‘ಜಿಲ್ಲೆಯಲ್ಲಿ ಅಣಬೆ ಬೆಳೆಯುವವರು ಶಿವಮೊಗ್ಗದಲ್ಲಿ ತರಬೇತಿ ಪಡೆಯುತ್ತಾರೆ. ಕೆಲವರು ಯೂಟ್ಯೂಬ್ ನೋಡಿಯೂ ಅಣಬೆ ಕೃಷಿ ಮಾಡಿದ್ದಾರೆ’ ಎಂದರು.</p>.<p>‘ವಾತಾವರಣದ ಬದಲಾವಣೆಗೆ ಪೂರಕವಾಗಿ ಅಣಬೆ ತಳಿಗಳನ್ನು ಬದಲಿಸಿ ಬೆಳೆಯುವ ಮೂಲಕ ಲಾಭ ಪಡೆಯಬಹುದು. ಮಿಲ್ಕಿ ತಳಿಯ ಅಣಬೆಗೆ ಹೋಟೆಲ್ಗಳಲ್ಲಿ ಹೆಚ್ಚಿನ ಬೇಡಿಕೆ ಇರುತ್ತದೆ. ಆ ತಳಿಯನ್ನು ಬೆಳೆದರೆ ಮಾರುಕಟ್ಟೆ ಸಮಸ್ಯೆಯೂ ಹೆಚ್ಚಾಗಿ ಕಾಡದು’ ಎನ್ನುತ್ತಾರೆ ಉಚ್ಚಿಲದ ಅಣಬೆ ಕೃಷಿ ತರಬೇತುದಾರೆ ಸುಶೀಲಾ.</p>.<div><blockquote>ಅಡಿಕೆ, ಭತ್ತ ಮೊದಲಾದ ಕೃಷಿಯನ್ನು ಮಾಡುವವರು ಉಪ ಕಸುಬಾಗಿ ಅಣಬೆ ಬೆಳೆಯಬಹುದು. ಹೆಚ್ಚು ಶ್ರಮ ಹಾಕಿದರೆ ಉತ್ತಮ ಲಾಭ ಪಡೆಯಬಹುದು </blockquote><span class="attribution">ರತ್ನಾಕರ, ಅಣಬೆ ಬೆಳೆಗಾರ</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260516-28-105978654</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>