<p><strong>ಉಡುಪಿ:</strong> ಒಂದೆಡೆ ಬಿಸಿಲಿನ ತೀವ್ರತೆ ಹೆಚ್ಚಾಗಿ ಇಳುವರಿ ಕುಸಿತವಾದರೆ ಮತ್ತೊಂದೆಡೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ರಫ್ತು ಸ್ಥಗಿತವಾಗಿ ಅನಾನಸ್ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.</p>.<p>ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳ ಮೊದಲಾದೆಡೆ ಸಾಕಷ್ಟು ಅನಾನಸ್ ಬೆಳೆಗಾರರಿದ್ದಾರೆ. ಅನಾನಸ್ ಬೆಳೆ ಲಾಭದಾಯಕವಾಗಿರುವ ಕಾರಣ ಹೆಚ್ಚಿನವರು ಬೇರೆ ಕೃಷಿಯನ್ನು ತೊರೆದು ಅನಾನಸ್ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ.</p>.<p>ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಅನಾನಸ್ನ ಬೆಳವಣಿಗೆ ಕುಂಠಿತವಾಗಿ ಇಳುವರಿ ಕುಸಿತವಾಗಿದೆ ಎಂದು ರೈತರು ತಿಳಿಸಿದ್ದಾರೆ.</p>.<p>ಅನಾನಸ್ ಬೆಳೆಯಲ್ಲಿ ವರ್ಷವಿಡೀ ಹಣ್ಣುಗಳು ಕೊಯ್ಲಿಗೆ ಸಿಗುತ್ತವೆ. ಕೆಲವು ಋತುಗಳಲ್ಲಿ ಈ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಕುದುರುತ್ತದೆ. ರಂಜಾನ್ ತಿಂಗಳಲ್ಲಿ, ಹಬ್ಬಗಳ ಋತುವಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲೂ ಅನಾನಸ್ ಹಣ್ಣಿಗೆ ಎಲ್ಲಿಲ್ಲದೆ ಬೇಡಿಕೆ ಕುದುರುತ್ತದೆ.</p>.<p>ಇದೀಗ ಮಾವಿನ ಹಣ್ಣು, ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು, ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ಅನಾನಸ್ ಹಣ್ಣಿಗೆ ಬೇಡಿಕೆ ಕುಸಿದಿದೆ ಎನ್ನುತ್ತಾರೆ ರೈತರು.</p>.<p>ಜಿಲ್ಲೆಯಲ್ಲಿ ಬೆಳೆಯುವ ಅನಾನಸ್ ಹಣ್ಣುಗಳು ಮಹಾರಾಷ್ಟ್ರ, ಗುಜರಾತ್, ದೆಹಲಿ ಮೊದಲಾದಡೆಗೆ ಮಾರಾಟವಾಗುತ್ತದೆ. ವ್ಯಾಪಾರಿಗಳು ರೈತರ ತೋಟಕ್ಕೆ ಬಂದು ಅನಾನಸ್ ಹಣ್ಣುಗಳನ್ನು ಖರೀದಿಸಿಕೊಂಡು ಹೋಗುತ್ತಾರೆ.</p>.<p>ಅನಾನಸ್ ಕೃಷಿಗೆ ಹೆಚ್ಚು ಕಾರ್ಮಿಕ ಅಗತ್ಯವಿದ್ದು, ಅನ್ಯ ರಾಜ್ಯಗಳ ಕಾರ್ಮಿಕರನ್ನೇ ಬೆಳೆಗಾರರು ಆಶ್ರಯಿಸಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ ಮೊದಲಾದೆಡೆ ಚುನಾವಣೆ ನಡೆದಿರುವುದರಿಂದ ಮತ ಹಾಕಲು ತೆರಳಿದ್ದ ಕಾರ್ಮಿಕರು ಇನ್ನೂ ಮರಳಿ ಬಂದಿಲ್ಲ. ಅದರಿಂದಲೂ ಸಮಸ್ಯೆಯಾಗುತ್ತಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.</p>.<p>ರಾಣಿ ತಳಿಯ ಅನಾನಸ್ ಗಿಡದಲ್ಲಿ ಮುಳ್ಳುಗಳು ಹೆಚ್ಚಿದ್ದರೂ ಅದರ ಹಣ್ಣುಗಳನ್ನು ತುಂಬಾ ದಿನಗಳ ವರೆಗೆ ಇರಿಸಬಹುದು. ಈ ಕಾರಣಕ್ಕೆ ಜಿಲ್ಲೆಯ ಹೆಚ್ಚಿನ ರೈತರು ಅದೇ ತಳಿಯ ಅನಾನಸ್ ಅನ್ನು ಬೆಳೆಯುತ್ತಾರೆ.</p>.<p>‘ಸದ್ಯ ಅನಾನಸ್ ಹಣ್ಣು ಕೆ.ಜಿ.ಗೆ ₹26ರಿಂದ ₹27 ದರವಿದೆ. ಕೆಲ ತಿಂಗಳ ಹಿಂದಿನವರೆಗೆ ಕೆ.ಜಿ.ಗೆ ₹32 ರಿಂದ ₹35ರಷ್ಟಿತ್ತು. ಕೆ.ಜಿ.ಗೆ ₹ 32 ಆದರೂ ಸಿಗದಿದ್ದರೆ ರೈತರಿಗೆ ನಷ್ಟು. ಕಾರ್ಮಿಕರ ಸಂಬಳ, ನಿರ್ವಹಣೆ ವೆಚ್ಚ ಮೊದಲಾದವುಗಳಿಗೆ ಅಧಿಕ ಖರ್ಚಾಗುತ್ತದೆ’ ಎನ್ನುತ್ತಾರೆ ಬೆಳೆಗಾರ ಫೆಡ್ರಿಕ್.</p>.<div><blockquote>ಕಳೆದ ಒಂದೂವರೆ ತಿಂಗಳಿನಿಂದ ಅನಾನಸ್ ಹಣ್ಣಿಗೆ ಬೇಡಿಕೆ ತೀವ್ರ ಕುಸಿದಿದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲೂ ಅನಾನಸ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇಲ್ಲ</blockquote><span class="attribution"> ಫೆಡ್ರಿಕ್, ಅನಾನಸ್ ಬೆಳೆಗಾರ</span></div>.<h2>‘ಹೊಡೆತ ನೀಡಿದ ಯುದ್ಧ’</h2><p>‘ಗುಜರಾತ್, ದೆಹಲಿ ಮೊದಲಾದೆಡೆಯ ವ್ಯಾಪಾರಿಗಳು ಜಿಲ್ಲೆಯ ರೈತರಿಂದ ಅನಾನಸ್ ಹಣ್ಣುಗಳನ್ನು ಖರೀದಿಸಿ, ಜಾಮ್, ಒಣ ಹಣ್ಣು ಮೊದಲಾದ ಉತ್ಪನ್ನಗಳನ್ನು ತಯಾರಿಸಿ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡುತ್ತಾರೆ. ಆದರೆ ಈಗ ಯುದ್ಧದ ಕಾರಣ ರಫ್ತು ನಿಂತಿದೆ. ಇದರಿಂದ ಅನಾನಸ್ ಹಣ್ಣುಗಳಿಗೆ ಬೇಡಿಗೆ ಕುಸಿದಿದೆ’ ಎನ್ನುತ್ತಾರೆ ಕುಂದಾಪುರದ ಹಾಲಾಡಿಯ ಅನಾನಸ್ ಬೆಳೆಗಾರ ಫೆಡ್ರಿಕ್.</p><p>‘ಈಗ ಅನ್ಯ ರಾಜ್ಯಗಳಿಂದ ಅನಾನಸ್ ಖರೀದಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಸೂಕ್ತ ಸಮಯದಲ್ಲಿ ಹಣ್ಣು ಕಟಾವು ಮಾಡದಿದ್ದರೆ ಅದು ಗಿಡದಲ್ಲಿಯೇ ಕೊಳೆತು ಹೋಗುತ್ತದೆ.’ ಎನ್ನುತ್ತಾರೆ ಅವರು.</p><p>‘ಅನಾನಸ್ ಹಣ್ಣಾಗುವ ಮೊದಲೇ ಕೊಯ್ದು ಬೇರೆ ರಾಜ್ಯಗಳಿಗೆ ಮಾರಾಟಕ್ಕೆ ಕಳುಹಿಸಲಾಗುತ್ತದೆ. ಹಣ್ಣಾದ ಬಳಿಕ ಅನಾನಸನ್ನು ಹೆಚ್ಚು ದಿನ ಇರಿಸಲು ಸಾಧ್ಯವಾಗುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ:</strong> ಒಂದೆಡೆ ಬಿಸಿಲಿನ ತೀವ್ರತೆ ಹೆಚ್ಚಾಗಿ ಇಳುವರಿ ಕುಸಿತವಾದರೆ ಮತ್ತೊಂದೆಡೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ರಫ್ತು ಸ್ಥಗಿತವಾಗಿ ಅನಾನಸ್ ಬೆಳೆಗಾರರು ಸಂಕಷ್ಟಕ್ಕೆ ಒಳಗಾಗಿದ್ದಾರೆ.</p>.<p>ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳ ಮೊದಲಾದೆಡೆ ಸಾಕಷ್ಟು ಅನಾನಸ್ ಬೆಳೆಗಾರರಿದ್ದಾರೆ. ಅನಾನಸ್ ಬೆಳೆ ಲಾಭದಾಯಕವಾಗಿರುವ ಕಾರಣ ಹೆಚ್ಚಿನವರು ಬೇರೆ ಕೃಷಿಯನ್ನು ತೊರೆದು ಅನಾನಸ್ ಬೆಳೆಯನ್ನು ನೆಚ್ಚಿಕೊಂಡಿದ್ದಾರೆ.</p>.<p>ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಅನಾನಸ್ನ ಬೆಳವಣಿಗೆ ಕುಂಠಿತವಾಗಿ ಇಳುವರಿ ಕುಸಿತವಾಗಿದೆ ಎಂದು ರೈತರು ತಿಳಿಸಿದ್ದಾರೆ.</p>.<p>ಅನಾನಸ್ ಬೆಳೆಯಲ್ಲಿ ವರ್ಷವಿಡೀ ಹಣ್ಣುಗಳು ಕೊಯ್ಲಿಗೆ ಸಿಗುತ್ತವೆ. ಕೆಲವು ಋತುಗಳಲ್ಲಿ ಈ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಕುದುರುತ್ತದೆ. ರಂಜಾನ್ ತಿಂಗಳಲ್ಲಿ, ಹಬ್ಬಗಳ ಋತುವಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲೂ ಅನಾನಸ್ ಹಣ್ಣಿಗೆ ಎಲ್ಲಿಲ್ಲದೆ ಬೇಡಿಕೆ ಕುದುರುತ್ತದೆ.</p>.<p>ಇದೀಗ ಮಾವಿನ ಹಣ್ಣು, ಹಲಸಿನ ಹಣ್ಣು, ಕಲ್ಲಂಗಡಿ ಹಣ್ಣು, ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ಅನಾನಸ್ ಹಣ್ಣಿಗೆ ಬೇಡಿಕೆ ಕುಸಿದಿದೆ ಎನ್ನುತ್ತಾರೆ ರೈತರು.</p>.<p>ಜಿಲ್ಲೆಯಲ್ಲಿ ಬೆಳೆಯುವ ಅನಾನಸ್ ಹಣ್ಣುಗಳು ಮಹಾರಾಷ್ಟ್ರ, ಗುಜರಾತ್, ದೆಹಲಿ ಮೊದಲಾದಡೆಗೆ ಮಾರಾಟವಾಗುತ್ತದೆ. ವ್ಯಾಪಾರಿಗಳು ರೈತರ ತೋಟಕ್ಕೆ ಬಂದು ಅನಾನಸ್ ಹಣ್ಣುಗಳನ್ನು ಖರೀದಿಸಿಕೊಂಡು ಹೋಗುತ್ತಾರೆ.</p>.<p>ಅನಾನಸ್ ಕೃಷಿಗೆ ಹೆಚ್ಚು ಕಾರ್ಮಿಕ ಅಗತ್ಯವಿದ್ದು, ಅನ್ಯ ರಾಜ್ಯಗಳ ಕಾರ್ಮಿಕರನ್ನೇ ಬೆಳೆಗಾರರು ಆಶ್ರಯಿಸಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ ಮೊದಲಾದೆಡೆ ಚುನಾವಣೆ ನಡೆದಿರುವುದರಿಂದ ಮತ ಹಾಕಲು ತೆರಳಿದ್ದ ಕಾರ್ಮಿಕರು ಇನ್ನೂ ಮರಳಿ ಬಂದಿಲ್ಲ. ಅದರಿಂದಲೂ ಸಮಸ್ಯೆಯಾಗುತ್ತಿದೆ ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.</p>.<p>ರಾಣಿ ತಳಿಯ ಅನಾನಸ್ ಗಿಡದಲ್ಲಿ ಮುಳ್ಳುಗಳು ಹೆಚ್ಚಿದ್ದರೂ ಅದರ ಹಣ್ಣುಗಳನ್ನು ತುಂಬಾ ದಿನಗಳ ವರೆಗೆ ಇರಿಸಬಹುದು. ಈ ಕಾರಣಕ್ಕೆ ಜಿಲ್ಲೆಯ ಹೆಚ್ಚಿನ ರೈತರು ಅದೇ ತಳಿಯ ಅನಾನಸ್ ಅನ್ನು ಬೆಳೆಯುತ್ತಾರೆ.</p>.<p>‘ಸದ್ಯ ಅನಾನಸ್ ಹಣ್ಣು ಕೆ.ಜಿ.ಗೆ ₹26ರಿಂದ ₹27 ದರವಿದೆ. ಕೆಲ ತಿಂಗಳ ಹಿಂದಿನವರೆಗೆ ಕೆ.ಜಿ.ಗೆ ₹32 ರಿಂದ ₹35ರಷ್ಟಿತ್ತು. ಕೆ.ಜಿ.ಗೆ ₹ 32 ಆದರೂ ಸಿಗದಿದ್ದರೆ ರೈತರಿಗೆ ನಷ್ಟು. ಕಾರ್ಮಿಕರ ಸಂಬಳ, ನಿರ್ವಹಣೆ ವೆಚ್ಚ ಮೊದಲಾದವುಗಳಿಗೆ ಅಧಿಕ ಖರ್ಚಾಗುತ್ತದೆ’ ಎನ್ನುತ್ತಾರೆ ಬೆಳೆಗಾರ ಫೆಡ್ರಿಕ್.</p>.<div><blockquote>ಕಳೆದ ಒಂದೂವರೆ ತಿಂಗಳಿನಿಂದ ಅನಾನಸ್ ಹಣ್ಣಿಗೆ ಬೇಡಿಕೆ ತೀವ್ರ ಕುಸಿದಿದೆ. ಇದರಿಂದ ಬೆಳೆಗಾರರಿಗೆ ನಷ್ಟ ಉಂಟಾಗಿದೆ. ಸ್ಥಳೀಯ ಮಾರುಕಟ್ಟೆಯಲ್ಲೂ ಅನಾನಸ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇಲ್ಲ</blockquote><span class="attribution"> ಫೆಡ್ರಿಕ್, ಅನಾನಸ್ ಬೆಳೆಗಾರ</span></div>.<h2>‘ಹೊಡೆತ ನೀಡಿದ ಯುದ್ಧ’</h2><p>‘ಗುಜರಾತ್, ದೆಹಲಿ ಮೊದಲಾದೆಡೆಯ ವ್ಯಾಪಾರಿಗಳು ಜಿಲ್ಲೆಯ ರೈತರಿಂದ ಅನಾನಸ್ ಹಣ್ಣುಗಳನ್ನು ಖರೀದಿಸಿ, ಜಾಮ್, ಒಣ ಹಣ್ಣು ಮೊದಲಾದ ಉತ್ಪನ್ನಗಳನ್ನು ತಯಾರಿಸಿ ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡುತ್ತಾರೆ. ಆದರೆ ಈಗ ಯುದ್ಧದ ಕಾರಣ ರಫ್ತು ನಿಂತಿದೆ. ಇದರಿಂದ ಅನಾನಸ್ ಹಣ್ಣುಗಳಿಗೆ ಬೇಡಿಗೆ ಕುಸಿದಿದೆ’ ಎನ್ನುತ್ತಾರೆ ಕುಂದಾಪುರದ ಹಾಲಾಡಿಯ ಅನಾನಸ್ ಬೆಳೆಗಾರ ಫೆಡ್ರಿಕ್.</p><p>‘ಈಗ ಅನ್ಯ ರಾಜ್ಯಗಳಿಂದ ಅನಾನಸ್ ಖರೀದಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಬೇಡಿಕೆಗೆ ಅನುಗುಣವಾಗಿ ಸೂಕ್ತ ಸಮಯದಲ್ಲಿ ಹಣ್ಣು ಕಟಾವು ಮಾಡದಿದ್ದರೆ ಅದು ಗಿಡದಲ್ಲಿಯೇ ಕೊಳೆತು ಹೋಗುತ್ತದೆ.’ ಎನ್ನುತ್ತಾರೆ ಅವರು.</p><p>‘ಅನಾನಸ್ ಹಣ್ಣಾಗುವ ಮೊದಲೇ ಕೊಯ್ದು ಬೇರೆ ರಾಜ್ಯಗಳಿಗೆ ಮಾರಾಟಕ್ಕೆ ಕಳುಹಿಸಲಾಗುತ್ತದೆ. ಹಣ್ಣಾದ ಬಳಿಕ ಅನಾನಸನ್ನು ಹೆಚ್ಚು ದಿನ ಇರಿಸಲು ಸಾಧ್ಯವಾಗುವುದಿಲ್ಲ’ ಎಂದೂ ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>