ಕೋವಿಡ್ ಲಾಕ್ಡೌನ್ ಸಮಯ ಪಿಎಚ್ಡಿ ಅಧ್ಯಯನಕ್ಕೆ ನೆರವಾಯಿತು. ಹಿಂದಿನಿಂದಲೂ ಸಂಸ್ಕೃತ, ವೇದಗಳ ಅಧ್ಯಯನದ ಬಗ್ಗೆ ಅತೀವ ಆಸಕ್ತಿ ಇತ್ತು. ಪ್ರಖ್ಯಾತ ವಿದ್ವಾಂಸದರಾದ ಬನ್ನಂಜೆ ಗೋವಿಂದಾಚಾರ್ಯರ ಪ್ರಭಾವ ಸಾಕಷ್ಟಿದೆ. ಗುರು ವಿದ್ವಾನ್ ಸಗ್ರಿ ರಾಘವೇಂದ್ರ ಆಚಾರ್ಯ ಅವರ ಮಾರ್ಗದರ್ಶನ, ಬೋಧನೆಯೂ ವೇದಗಳ ಅಧ್ಯಯನಕ್ಕೆ ಪ್ರೇರಣೆ ನೀಡಿದೆ ಎನ್ನುತ್ತಾರೆ ಉಷಾ ಚಡಗ.