25 ವರ್ಷಗಳಿಂದ ಉಡುಪಿಯಲ್ಲಿ ನೆಲೆಸಿರುವ ಬಸವರಾಜ್ಬೀಡಿನಗುಡ್ಡೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಪ್ರತಿದಿನ ಬೆಳಗಿನ ಜಾವ ಶಿವಮೊಗ್ಗದಿಂದ ಬರುವ ತರಕಾರಿಯನ್ನು ಖರೀದಿಸಿ ಸಾರ್ವಜನಿಕರಿಗೆ ಮಾರುತ್ತಾರೆ. ಹಾಕಿದ ಬಂಡವಾಳ ಕೈಸೇರಿದ ಬಳಿಕ, ಉಳಿದ ಎಲ್ಲ ತರಕಾರಿಗಳನ್ನು ಕೊರೊನಾ ವಾರಿಯರ್ಸ್ಗಳಿಗೆ ತಲುಪಿಸುತ್ತಾರೆ. ಅವರು ನಗರದಲ್ಲಿ ಆಹಾರ ಹಂಚುವ ಸಂಘ ಸಂಸ್ಥೆಗಳಿಗೆ ತರಕಾರಿಯನ್ನು ಮುಟ್ಟಿಸುತ್ತಾರೆ.