‘1998ನೇ ಬ್ಯಾಚ್ಗೆ ಸೇರಿದ 34 ಕೆಎಎಸ್ ಅಧಿಕಾರಿಗಳನ್ನು, ಐಎಎಸ್ ಶ್ರೇಣಿಗೆ ಬಡ್ತಿ ನೀಡಲು ಶಿಫಾರಸು ಮಾಡಲಾದ ಪಟ್ಟಿಯಲ್ಲಿ ನನ್ನ ಹೆಸರು ಕೈಬಿಡಲಾಗಿದೆ. ನನ್ನ ಹೆಸರಿನ ಬದಲಿಗೆ ಎಂ.ವಿ.ಚಂದ್ರಕಾಂತ ಹೆಸರನ್ನು ಸೇರಿಸಬೇಕೆಂಬ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಆದೇಶ ಕಾನೂನು ಬಾಹಿರ’ ಎಂದು ಆಕ್ಷೇಪಿಸಿ ಲತಾಕುಮಾರಿ ಹೈಕೋರ್ಟ್ ಮೆಟ್ಟಿಲೇರಿದ್ದರು.