ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ್ಣುವರ್ಧನ್‌ ಉಡುಪಿ ನೂತನ ಎಸ್‌ಪಿ

ಕೊನೆ ಕ್ಷಣದಲ್ಲಿ ಅಕ್ಷಯ್‌ ಅವರ ವರ್ಗಾವಣೆ ಆದೇಶ ಮಾರ್ಪಾಡು ಮಾಡಿದ ಸರ್ಕಾರ
Last Updated 1 ಜನವರಿ 2020, 15:30 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಗೆ ನೂತನ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದ ಅಕ್ಷಯ್‌ ಮಚ್ಚೀಂದ್ರ ಅವರ ವರ್ಗಾವಣೆ ಆದೇಶವನ್ನು ರಾಜ್ಯ ಸರ್ಕಾರ ದಿಢೀರ್ ಬದಲಿಸಿದೆ. ಅವರ ಜಾಗಕ್ಕೆ ವಿಷ್ಣುವರ್ಧನ ಅವರನ್ನು ನೇಮಕ ಮಾಡಿ ಬುಧವಾರ ಆದೇಶ ಹೊರಡಿಸಿದೆ.

ಚಿಂಚೋಳಿ ಎಎಸ್‌ಪಿ ಆಗಿದ್ದ ಅಕ್ಷಯ್‌ ಅವರು ಬುಧವಾರ ಅಧಿಕಾರ ಸ್ವೀಕರಿಸಲು ಉಡುಪಿಗೆ ಬಂದಿದ್ದರು. ಡಿವೈಎಸ್‌ಪಿಗಳು, ಸಿಪಿಐಗಳು, ಪಿಎಸ್‌ಐಗಳು ಕೇಂದ್ರ ಕಚೇರಿಗೆ ಬಂದಿದ್ದರು. ಕೊನೆ ಕ್ಷಣದಲ್ಲಿ ಸರ್ಕಾರ ವರ್ಗಾವಣೆ ಆದೇಶವನ್ನು ಮಾರ್ಪಾಡುಗೊಳಿಸಿದ್ದರಿಂದ ಅಕ್ಷಯ್ ಮಚ್ಚೀಂದ್ರ ಅವರು ಅಧಿಕಾರ ಸ್ವೀಕರಿಸದೆ ವಾಪಾಸ್‌ ಮರಳಬೇಕಾಯಿತು.

ನೂತನ ಎಸ್‌ಪಿ ವಿಷ್ಣುವರ್ಧನ ಹಿಂದೆ ಉಡುಪಿಯಲ್ಲಿಯೇ ಎಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು. ನಿರ್ಗಮಿತ ಎಸ್‌ಪಿ ನಿಶಾ ಜೇಮ್ಸ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಸ್‌ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT