ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ನಾಯಕತ್ವದಲ್ಲಿ ವಿಶ್ವಕರ್ಮ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿ ಹಾದಿಯಲ್ಲಿದೆ. ಕೆ.ಪಿ.ನಂಜುಂಡಿ ಅವರಿಗೆ ಆಹ್ವಾನ ನೀಡದೆ ಈಚೆಗೆ ಎಸಿಬಿ ವಿಚಾರಣೆಗೆ ಗುರಿಯಾಗಿರುವ ವಿಶ್ವಕರ್ಮ ನಿಗಮದ ಅಧ್ಯಕ್ಷ ಬಾಬು ಪತ್ತಾರ ಅವರೊಂದಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಭೆ ನಡೆಸಿರುವುದು ಸಮಾಜಕ್ಕೆ ಮುಜುಗರ ತಂದಿದೆ.