ವೇದ, ಉಪನಿಷತ್ತು, ಪುರಾಣ, ಮೀಮಾಂಸೆಗಳ ಬಗ್ಗೆಯೂ ಅಪಾರ ಜ್ಞಾನಹೊಂದಿದ್ದ ಅಪರೂಪದ ಕಲಾವಿದರಾಗಿದ್ದವರು ವಾಸುದೇವ ಸಾಮಗರು. ‘ಸಂಯಮಂ’ ಎಂಬ ತಾಳಮದ್ದಳೆ ತಂಡ ಹುಟ್ಟುಹಾಕಿ ತಾಳಮದ್ದಳೆಗೆ ಹೊಸ ರೂಪ ಹಾಗೂ ಶಿಸ್ತು ತಂದುಕೊಟ್ಟಿದ್ದರು. ಯಕ್ಷಲೋಕ ದಿಗ್ವಿಜಯ ಪ್ರಸಂಗದ ಪ್ರದೀಪನ ಪಾತ್ರ ಸಾಮಗರಿಗೆ ಅತ್ಯಂತ ಪ್ರಸಿದ್ಧಿ ತಂದುಕೊಟ್ಟಿತ್ತು. ಆ ಪಾತ್ರದ ಹೆಸರನ್ನೇ ಮಗನಿಗೆ ಇಟ್ಟಿದ್ದರು. ಮನ್ಮಥ, ಪರಶುರಾಮ, ಈಶ್ವರ, ಶುಕ್ರಚಾರ್ಯ, ಉತ್ತರ ಪಾತ್ರಗಳ ಪ್ರದರ್ಶನವನ್ನು ಯಕ್ಷಲೋಕ ಮರೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಅವರ ಅಭಿಮಾನಿಗಳು.