ಯಕ್ಷಗಾನ ಕಲಾವಿದರಾದ ಪೊಲ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಚೇರ್ಕಾಡಿ ಮಂಜುನಾಥ ಪ್ರಭು, ಪೆರುವಾಯಿ ನಾರಾಯಣ ಭಟ್, ಕೆ. ನಾರಾಯಣ ಪೂಜಾರಿ ಉಜಿರೆ, ಕೆ. ಅಣ್ಣಿ ಗೌಡ ಬೆಳ್ತಂಗಡಿ, ಶೀನ ನಾಯ್ಕ ಬ್ರಹ್ಮೇರಿ, ಕೆ.ಪಿ. ಹೆಗಡೆ ಕೋಟ, ನಿಡ್ಲೆ ಗೋವಿಂದ ಭಟ್, ಆಜ್ರಿ ಗೋಪಾಲ ಗಾಣಿಗ, ಮೂರೂರು ವಿಷ್ಣು ಭಟ್, ಮಹಾಬಲ ದೇವಾಡಿಗ ಕಟ್ಬೆಲ್ತೂರ್, ಪಡ್ರೆ ಕುಮಾರ, ಅನಂತ ಹೆಗಡೆ ನಿಟ್ಟೂರು, ಎಂ. ಶ್ರೀಧರ ಹೆಬ್ಬಾರ್, ತೋಡಿಕಾನ ವಿಶ್ವನಾಥ ಗೌಡ, ನಾಗಪ್ಪ ಗೌಡ ಮತ್ತು ಲಕ್ಷ್ಮಣ ಕೋಟ್ಯಾನ್ ಸುಂಕದಕಟ್ಟೆ ಅವರಿಗೆ ಯಕ್ಷಗಾನ ಕಲಾರಂಗ ಪ್ರಶಸ್ತಿ ಹಾಗೂ ಯಕ್ಷಗಾನ ಕಲಾರಂಗದ ಕಾರ್ಯಕರ್ತ ರಮೇಶ ರಾವ್ ಸಾಲಿಗ್ರಾಮ ಅವರಿಗೆ ಯಕ್ಷಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.