ಯೋಗ ಗುರು ಡಾ. ಶ್ರೀಕಾಂತ ಸಿದ್ಧಾಪುರ ಮಾತನಾಡಿ, ‘ಯೋಗ ಎಂದರೆ ಆಸನ, ಪ್ರಾಣಾಯಾಮ ಹಾಗೂ ಧ್ಯಾನ ಮಾತ್ರವಲ್ಲ, ಯೋಗ ವಿಸ್ತಾರವಾದುದು. ಸಮಾಜದ ಆರೋಗ್ಯದ ದೃಷ್ಟಿಯಿಂದ ಆಸನ, ಪ್ರಾಣಯಾಮ ಹಾಗೂ ಧ್ಯಾನಗಳಿಗೆ ಪ್ರಾಮುಖ್ಯ ಕೊಡಬೇಕಾಗಿದೆ. ಆಸನ ಹಾಗೂ ಪ್ರಾಣಾಯಾಮಗಳನ್ನು ಹಂತಹಂತವಾಗಿ ಗುರು ಮುಖೇನ ಅಭ್ಯಸಿಸಬೇಕು. ದೇಹ ಹಾಗೂ ಶ್ವಾಸಕೋಶ ಯೋಗಕ್ಕೆ ಹೊಂದಿಕೊಳ್ಳಲು ಸಮಯ ಬೇಕಾಗಬಹುದು. ಹಾಗಾಗಿ ತಾಳ್ಮೆಯಿಂದ ಅಭ್ಯಾಸ ಮಾಡಬೇಕು’ ಎಂದು ಸಲಹೆ ನೀಡಿದರು.