ಇಲ್ಲಿನ ಭುವನೇಂದ್ರ ಕಾಲೇಜಿನ ರಾಮಕೃಷ್ಣ ಸಭಾಬವನದಲ್ಲಿ ಕಾಲೇಜಿನ ವಿವೇಕಾನಂದ ಅಧ್ಯಯನ ಕೇಂದ್ರ ಹಾಗೂ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾದ ಯೋಗ ತರಬೇತಿ ಕಮ್ಮಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಇಂದು ದುಡಿಮೆ ಕಡಿಮೆಯಾಗಿದೆ. ದೇಹ ಶ್ರಮ ಬಹಳ ಕಡಿಮೆ. ಜತೆಗೆ ಕೆಟ್ಟ ಚಟಗಳು ನಮ್ಮನ್ನು ಆಳುತ್ತಿವೆ. ಹಾಗಾಗಿ, ಅವುಗಳಿಂದ ದೂರಾಗಬೇಕಾದರೆ ನಾವು ಹೆಚ್ಚು ಯೋಗದತ್ತ ಗಮನಕೊಡಬೇಕು’ ಎಂದರು.