ಸಮರ್ಥನಂ ಅಂಗವಿಕಲರ ಸಂಸ್ಥೆ, ಪಿಂಕಥಾನ್ ಸಹಯೋಗದಲ್ಲಿ ಆಯೋಜಿಸಿರುವ ಈ ಮ್ಯಾರಥಾನ್ನಲ್ಲಿ ದೃಷ್ಟಿಹೀನ ಕ್ರೀಡಾಪಟುಗಳಾದ ಎನ್.ಡಿ. ಸುನಿತಾ, ಎನ್.ಆರ್.ಕಾವ್ಯಾ, ಎಸ್.ಮಾಲಾ ಕೋಲ್ಕರ್, ನಂದೀಶ್ ಜನಾರ್ಧನ, ರೇಣುಕಾ ರಜಪೂತ್, ಅಜಯ್ ಈರಣ್ಣ ಪಾಲ್ಗೊಂಡಿದ್ದಾರೆ. ಬುಧವಾರ ಮುಂಜಾನೆ ಮೈಸೂರಿನಲ್ಲಿ ಮ್ಯಾರಥಾನ್ಗೆ ಚಾಲನೆ ದೊರೆತಿತ್ತು. ಅಲ್ಲಿಂದ ಹೊರಟ ಈ ತಂಡವು ರಾತ್ರಿ ಮದ್ದೂರಿನಲ್ಲಿ ವಿಶ್ರಮಿಸಿತ್ತು. ಗುರುವಾರ ಚನ್ನಪಟ್ಟಣ, ರಾಮನಗರದ ಮೂಲಕ ಪ್ರಯಾಣ ಮುಂದುವರಿಸಿದ್ದು, ಬಿಡದಿಯಲ್ಲಿ ವಿಶ್ರಮಿಸಿತು. ಶುಕ್ರವಾರ ಬೆಂಗಳೂರು ತಲುಪಲಿದ್ದು, ಕಂಠೀರವ ಕ್ರೀಡಾಂಗಣದಲ್ಲಿ ಓಟ ಮುಕ್ತಾಯವಾಗಲಿದೆ.