ಸಾಮಾಜಿಕ ಅರಣ್ಯ ವಿಭಾಗಗಳ ಸುಪರ್ದಿಯಲ್ಲಿರುವ ಹಣಕೋಣ, ಕೋವೆ ಹಾಗೂ ವಿರ್ಜೆಯ ನರ್ಸರಿಗಳಲ್ಲಿಅಕೇಶಿಯಾ, ಬಿದಿರು, ಬೆತ್ತ, ಕಿಂದಳ್, ಸಾಗವಾನಿ, ಹೊನ್ನೆ ಮುಂತಾದ ಗಿಡಗಳ ಜೊತೆಗೆ ಹಲಸು, ಮಾವು, ನೇರಳೆಯಂಥ ಹಣ್ಣಿನ ಸಸಿಗಳನ್ನೂಬೆಳೆಸಲಾಗಿದೆ. ಇದರ ಜತೆಗೆ ಬೀಜದುಂಡೆಗಳನ್ನೂ ತಯಾರಿಸಲಾಗುತ್ತಿದ್ದು, ಮಳೆ ಬೀಳುತ್ತಿದ್ದಂತೆ ಇವುಗಳ ನಾಟಿ ಕಾರ್ಯ ಶುರುವಾಗಲಿದೆ.