ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1,185 ಹೆಕ್ಟೇರ್ ನೆಡುತೋಪು ನಿರ್ಮಾಣ ಯೋಜನೆ

ಕಾರವಾರ ಉಪವಿಭಾಗದ ಮೂರು ನರ್ಸರಿಗಳಲ್ಲಿ 13.74 ಲಕ್ಷ ಸಸಿಗಳು
Last Updated 25 ಮೇ 2019, 14:04 IST
ಅಕ್ಷರ ಗಾತ್ರ

ಕಾರವಾರ:ಪ್ರಸಕ್ತ ಸಾಲಿನಲ್ಲಿ 1,185 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ನೆಡುತೋಪು ನಿರ್ಮಾಣ ಮಾಡಲು ಅಗತ್ಯ ಇರುವ ಸುಮಾರು 13.74 ಲಕ್ಷ ವಿವಿಧ ಜಾತಿಯ ಸಸಿಗಳನ್ನುಕಾರವಾರ ಉಪವಿಭಾಗದಮೂರುನರ್ಸರಿಗಳಲ್ಲಿ ಬೆಳೆಸಲಾಗಿದೆ.

ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಬರುವವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನ ಮಹೋತ್ಸವ ಆಚರಿಸಲೂಅರಣ್ಯ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಇದಕ್ಕಾಗಿ ಅಗತ್ಯ ಇರುವ ಗಿಡಗಳನ್ನು ಕೂಡ ಈ ನರ್ಸರಿಗಳಿಂದ ಪೂರೈಸಲಾಗುತ್ತದೆ.

ಸಾಮಾಜಿಕ ಅರಣ್ಯ ವಿಭಾಗಗಳ ಸುಪರ್ದಿಯಲ್ಲಿರುವ ಹಣಕೋಣ, ಕೋವೆ ಹಾಗೂ ವಿರ್ಜೆಯ ನರ್ಸರಿಗಳಲ್ಲಿಅಕೇಶಿಯಾ, ಬಿದಿರು, ಬೆತ್ತ, ಕಿಂದಳ್, ಸಾಗವಾನಿ, ಹೊನ್ನೆ ಮುಂತಾದ ಗಿಡಗಳ ಜೊತೆಗೆ ಹಲಸು, ಮಾವು, ನೇರಳೆಯಂಥ ಹಣ್ಣಿನ ಸಸಿಗಳನ್ನೂಬೆಳೆಸಲಾಗಿದೆ. ಇದರ ಜತೆಗೆ ಬೀಜದುಂಡೆಗಳನ್ನೂ ತಯಾರಿಸಲಾಗುತ್ತಿದ್ದು, ಮಳೆ ಬೀಳುತ್ತಿದ್ದಂತೆ ಇವುಗಳ ನಾಟಿ ಕಾರ್ಯ ಶುರುವಾಗಲಿದೆ.

‘ಇವುಗಳಲ್ಲಿ ಕೆಲವನ್ನು ರಿಯಾಯಿತಿ ದರದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೂ ವಿತರಿಸಲಾಗುತ್ತದೆ.ಶಾಲಾ- ಕಾಲೇಜು, ಸರ್ಕಾರಿ ಕಚೇರಿ ಆವರಣ, ರಸ್ತೆ ಬದಿ ನೆಟ್ಟು ಅಭಿವೃದ್ಧಿ ಪಡಿಸಲು ಕೂಡ ಈ ಸಸಿಗಳನ್ನು ಉಪಯೋಗಿಸಲಾಗುತ್ತದೆ’ ಎಂದು ಉಪವಿಭಾಗದಉಪ ಅರಣ್ಯ ಅಧಿಕಾರಿವಸಂತರೆಡ್ಡಿ ತಿಳಿಸಿದರು.

‘ಶಾಲಾ ಮಕ್ಕಳಿಗೆ ವಿತರಿಸಲು ಎಂಎಂಎಸ್‌ವಿ ಯೋಜನೆಯ ಅಡಿ 4,200 ಸಸಿ, ಆರ್‌ಎಸ್‌ಪಿಡಿ ಯೋಜನೆಯ ಅಡಿ ಸಾರ್ವಜನಿಕರಿಗೆ ನೀಡಲು 29,700 ಸಸಿ, ಹಸಿರು ಕರ್ನಾಟಕ ಯೋಜನೆಯ ಅಡಿ ಮನಮಹೋತ್ಸವ ಕಾರ್ಯಕ್ರಮಕ್ಕೆ ವಿತರಿಸಲು 71,500 ಸಸಿಗಳನ್ನು ಮೀಸಲಿಡಲಾಗಿದೆ. ಪ್ರಸಕ್ತ ಸಾಲಿನ ಮಳೆಗಾಲದಲ್ಲಿ 4.92 ಕಿ.ಮೀ. ರಸ್ತೆ ಬದಿ ಮಾನ್ಸೂನ್ ನೆಡುತೋಪು ಹಾಗೂ 3.03 ಕಿ.ಮೀ. ನಗರ ಪ್ರದೇಶದಲ್ಲಿ ಮಾನ್ಸೂನ್ ನೆಡುತೋಪು ರಚನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಗಿದೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT