ಹೆಚ್ಚಿನ ಕಡೆಗಳಲ್ಲಿ ಕೊಠಡಿಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇನ್ನು ಕೆಲವೆಡೆಗಳಲ್ಲಿ ಮರದ ಟೊಂಗೆ, ತೆಂಗಿನ ಮರ ಮುರಿದು ಬಿದ್ದು, ಚಾವಣಿ ಮುರಿದಿದೆ. ಚಾವಣಿ ಮೇಲಿನ ಹೆಂಚು ಒಡೆದಿದೆ. ‘ಎಲ್ಲೂ ತರಗತಿ ನಡೆಸಲು ಸಮಸ್ಯೆಯಿಲ್ಲ. ಹೆಚ್ಚುವರಿ ಕೊಠಡಿ ಅಥವಾ ಇರುವ ಕೊಠಡಿಗಳಲ್ಲೇ ತರಗತಿಗಳು ನಡೆಯುತ್ತಿವೆ. ಗೋಡೆ ಬಿರುಕು ಬಿಟ್ಟಿರುವ ಕೊಠಡಿಗಳಲ್ಲಿ ಮಕ್ಕಳನ್ನು ಕೂರಿಸಿಕೊಂಡು ಪಾಠಮಾಡದಂತೆ ಸೂಚಿಸಲಾಗಿದೆ. ಇಂತಹ ಕೊಠಡಿಗಳ ಗೋಡೆಗಳನ್ನು ಹೊಸದಾಗಿಯೇ ನಿರ್ಮಿಸಲಾಗುವುದು’ ಎಂದು ಡಿಡಿಪಿಐ ದಿವಾಕರ ಶೆಟ್ಟಿ ಪ್ರತಿಕ್ರಿಯಿಸಿದರು.