ಚುನಾವಣೆಗಳಲ್ಲಿ ಅಂಗವಿಕಲರು ಕೆಲವು ಅನಿವಾರ್ಯ ಕಾರಣಗಳಿಂದ ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುತ್ತಿದ್ದರು. ಆದರೆ, ಇದನ್ನು ಮನಗಂಡ ಚುನಾವಣಾ ಆಯೋಗ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳನ್ನು ಅಂಗವಿಕಲ ಸ್ನೇಹಿಯನ್ನಾಗಿ ಪರಿವರ್ತಿಸಿತ್ತು. ಜತೆಗೆ, ಅವರನ್ನು ಸೆಳೆಯಲು ಚುನಾವಣೆಗೂ ಪೂರ್ವ ಜಾಗೃತಿ ಜಾಥಾ, ರ್ಯಾಲಿ ಹಾಗೂ ಆಯ್ದ ಕೆಲವರಿಗೆ ಪ್ಯಾರಾಗ್ಲೈಡಿಂಗ್ಗೆ ಅವಕಾಶ ಮಾಡಿಕೊಡಲಾಗಿತ್ತು.