ಇತ್ತೀಚಿನ ಕೆಲವು ತಿಂಗಳಿಗಳಿಂದ ಕೊಡಸೆ ಕಣ್ಣಿಗೇರಿ ಭಾಗದಲ್ಲಿ ಕರಡಿ ಹಾಗೂ ಚಿರತೆಗಳು ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದ್ದು, ಪ್ರತಿದಿನ ರಾತ್ರಿ ಗ್ರಾಮದ ಒಂದೆರಡು ನಾಯಿಗಳನ್ನು ಚಿರತೆ ಎತ್ತಿಕೊಂಡು ಹೋಗುತ್ತಿದೆ. ವನ್ಯಪ್ರಾಣಿಗಳಿಂದಾಗಿ ಅರಣ್ಯದಂಚಿನ ಗದ್ದೆಗಳಲ್ಲಿ ಕೆಲಸ ಮಾಡಲು ರೈತರು ಭಯ ಪಡುತ್ತಿದ್ದಾರೆ ಎಂದು ಸ್ಥಳೀಯರಾದ ವಾಸುದೇವ್ ಮಾಪ್ಸೇಕರ್ ಹೇಳುತ್ತಾರೆ.