ಹಾವೇರಿಯ ಬ್ಯಾಡಗಿ ಇಸ್ಲಾಂಪುರದ ತಬ್ರೇಜ್ ಹನೀಫ್ (36), ಬ್ಯಾಡಗಿ ಶಿವಪುರ ಬಡಾವಣೆಯ ವಾಸುದೇವ ಹರಕೇರಿ (29) ಬಂಧಿತರು. ಆರೋಪಿಗಳು ಹಾನಗಲ್ ಸಂಗೂರು ಹೊಳೆಯ ಸಮೀಪ ಮೇಯುತ್ತಿದ್ದ ದನಗಳನ್ನು ಕಳುವು ಮಾಡಿ, ಅವುಗಳನ್ನು ಕಡಿದು ಕಾರಿನಲ್ಲಿ ಭಟ್ಕಳದ ಮದುವೆಯೊಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದರು ಎನ್ನಲಾಗಿದೆ. ಮಾಂಸ ಸಾಗಾಟಕ್ಕೆ ಬಳಸಿದ್ದ ಸ್ವಿಫ್ಟ್ ಡಿಸೈರ್ ಕಾರನ್ನು ಸಹ ವಶಪಡಿಸಿಕೊಳ್ಳಲಾಗಿದೆ.