ಇಲ್ಲಿನ ಮಾರಿಕಾಂಬಾ ದೇವಾಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು, ಪಕ್ಷದ ಅಭ್ಯರ್ಥಿ ಸುನೀಲ್ ಪವಾರ ಜತೆಗೂಡಿ ದೇವಿಗೆ ಪೂಜೆ ಸಲ್ಲಿಸಿದರು. ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕಾರಣ ಉದ್ದಿಮೆಯಂತಾಗಿದೆ. ಹಣ ಬಲ, ತೋಳ್ಬಲದಿಂದ ರಾಜಕೀಯ ಮಾಡುವವರೇ ಅಧಿಕವಾಗಿದ್ದಾರೆ. ಆದರೆ, ಉತ್ತಮ ಪ್ರಜಾಕೀಯ ಪಕ್ಷ ಇವೆಲ್ಲವನ್ನೂ ಹೊರತುಪಡಿಸಿ ಬೇರೆ ರೀತಿಯಲ್ಲಿ ಯೋಚಿಸಿ, ರಾಜಕೀಯಕ್ಕೆ ಬಂದಿದೆ’ ಎಂದರು.