ಕೊಂಚ ಎಚ್ಚರಿಕೆ ವಹಿಸಿದರೆ ಕುಟುಂಬ ಸಹಿತ ಇಲ್ಲಿಗೆ ಬಂದು ನದಿಯ ಸೊಬಗನ್ನು ಸವಿದು ಅರ್ಧ ದಿನ ಕಳೆದು ಹೋಗಬಹುದು. ಕುಡಿದು, ತಿಂದು ಮಜಾ ಮಾಡಿ ನದಿಯ ಪರಿಸರ ಹಾಳು ಮಾಡುವವರಿಗೆ ಅಪಾಯ ಹೆಚ್ಚು. ಇಲ್ಲಿ ಅಘನಾಶಿನಿಯ ಸೊಬಗನ್ನು ಸವಿಯಬೇಕಾದರೆ ನೀರಿಗೆ ಇಳಿಯದಂಥ ಸಂಯಮವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಅರಣ್ಯ ಇಲಾಖೆ ಸಸ್ಯಪಾಲನಾ ಕ್ಷೇತ್ರದ ಕಾಳಜಿಯಿಂದ ನದಿ ದಂಡೆಯ ಸುತ್ತಲಿನ ಶುಚಿತ್ವ ಕಾಪಾಡಲು ಸಾಧ್ಯವಾಗಿದೆ.