ಬಹುಬೆಳೆ ಬಿತ್ತಬೇಕು: 'ಮಳೆಯ ಏರಿಳಿತದಿಂದ ಹೆಚ್ಚಿನ ರೈತರು ಹಾನಿ ಅನುಭವಿಸುತ್ತಿದ್ದರಿಂದ, ಮೆಕ್ಕೆಜೋಳ ಹಾಗೂ ಭತ್ತ ಇವೆರಡನ್ನೂ ಸಮನಾಗಿ ಬಿತ್ತನೆ ಮಾಡಿದರೆ ಅನುಕೂಲ. ಒಂದೇ ಬೆಳೆ ಬಿತ್ತುವುದರಿಂದ ನಷ್ಟವಾಗುವ ಸಾಧ್ಯತೆ ಇರುತ್ತದೆ. ಒಬ್ಬ ರೈತನಿಗೆ ಗರಿಷ್ಠ 5 ಎಕರೆಗೆ ಸೀಮಿತಗೊಂಡಂತೆ, 3ಎಕರೆಗೆ ಮೆಕ್ಕೆಜೋಳ, 2 ಎಕರೆಗೆ ಭತ್ತ ಅಥವಾ ಅದಲು ಬದಲು ಪ್ರಮಾಣದಲ್ಲಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ' ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್.ಕುಲಕರ್ಣಿ ಹೇಳಿದರು.