ಚನ್ನರಾಯಪಟ್ಟಣ: ಜೋಗಿಪುರ ದಲ್ಲಿರುವ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಕಟ್ಟಡದಲ್ಲಿ ಹಾಕಿರುವ ರಾಜಕೀಯ ನಾಯಕರಾದ ಎಚ್.ಡಿ. ರೇವಣ್ಣ, ಸಿ.ಎನ್.ಬಾಲಕೃಷ್ಣ ಭಾವಚಿತ್ರ ತೆರವುಗೊಳಿಸಲು ಅಧ್ಯಕ್ಷೆ ಆಗ್ರಹಿಸಿದ್ದಾರೆ.ಸಂಘದ ಅಧ್ಯಕ್ಷೆ ಬೋರಮ್ಮ ಹಾಗೂ ಕೆಲ ನಿರ್ದೇಶಕರು, ಭಾವಚಿತ್ರ ಹಾಕಿರುವುದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಎಂದರು. ಭಾವಚಿತ್ರ ಅಳವಡಿಕೆ ಕೆಲವರ ಬೇಸರಕ್ಕೆ ಕಾರಣವಾಗಿದ್ದು, ಹಾಲು ಸಂಗ್ರದ ಮೇಲೂ ಪರಿಣಾಮ ಬೀರಿದೆ. ಸದ್ಯ ಸಂಘದ ಕಾರ್ಯದರ್ಶಿ ಮನೆಯಲ್ಲಿ ಹಾಲು ಸಂಗ್ರಹಿಸಲಾಗುತ್ತಿದೆ ಎಂದು ದೂರಿದರು.ಕಾರ್ಯದರ್ಶಿ ಮನೆಯಲ್ಲಿ ಹಾಲು ಸಂಗ್ರಹಿಸುತ್ತಿರುವ ಕಾರಣ ಕೆಲವರು ಶನಿವಾರ ಸಂಜೆಯಿಂದ ಹಾಲು ಪೂರೈಸುತ್ತಿಲ್ಲ’ ಎಂದು ಹೇಳಿದ್ದಾರೆ. ಡೇರಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ನಿವಾರಿಸಿ ಎಂದರು.