ಜುಲೈ 7ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಠೇವಣಿ ಹಣ ಪಡೆಯಲು ಬಂದಿದ್ದ ವೃದ್ಧರೊಬ್ಬರ ಬಳಿ ಶಾಖೆಯ ಹೊರ ರಾಜ್ಯದ ಸಿಬ್ಬಂದಿ ಉಡಾಫೆ ವರ್ತನೆ ತೋರಿದ್ದಾರೆ. ಕನ್ನಡಿಗರ ಉದ್ಯೋಗ ಕಬಳಿಸಿ ಇಲ್ಲಿಗೆ ಬಂದಿರುವ ಹೊರರಾಜ್ಯದ ಸಿಬ್ಬಂದಿಯ ಉದಾಸೀನ ವರ್ತನೆ ಕನ್ನಡಿಗರ ಆಕ್ರೋಶ ಹೆಚ್ಚಿಸಿದೆ. ಹೊರ ರಾಜ್ಯದ ಸಿಬ್ಬಂದಿಯನ್ನು ಆದಷ್ಟು ಬೇಗ ವರ್ಗಾವಣೆ ಮಾಡಿ, ಕನ್ನಡಿಗ ಸಿಬ್ಬಂದಿ ನೇಮಕ ಮಾಡಬೇಕು. ಇಲ್ಲಿವಾದಲ್ಲಿ ಮುಂದೆ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ಘಟನೆಯ ಸಂದರ್ಭದಲ್ಲಿ ಶಾಖೆಯಲ್ಲಿದ್ದ ಸಂಘಟನೆಯ ಸಂಚಾಲಕ ಪ್ರಸನ್ನ ನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.