ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬನವಾಸಿಯ ಕೆನರಾ ಬ್ಯಾಂಕ್‌ನಲ್ಲಿ ಹೊರರಾಜ್ಯ ಸಿಬ್ಬಂದಿ ಒರಟು ವರ್ತನೆ: ಸಂಘಟನೆ ಆರೋಪ

Last Updated 9 ಜುಲೈ 2020, 11:43 IST
ಅಕ್ಷರ ಗಾತ್ರ

ಶಿರಸಿ: ತಾಲ್ಲೂಕಿನ ಬನವಾಸಿಯ ಕೆನರಾ ಬ್ಯಾಂಕ್ (ಸಿಂಡಿಕೇಟ್ ಬ್ಯಾಂಕ್) ಶಾಖೆಯಲ್ಲಿ ಹೊರ ರಾಜ್ಯದ ಸಿಬ್ಬಂದಿ ಸ್ಥಳೀಯ ಗ್ರಾಹಕರೊಡನೆ ಒರಟಾಗಿ ವರ್ತಿಸುತ್ತಿರುವುದು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಶಾಖಾ ಮುಖ್ಯಸ್ಥರು ಗಮನ ಹರಿಸುತ್ತಿಲ್ಲ ಎಂದು ‘ನಾವು ಕನ್ನಡಿಗರು’ ಸಂಘಟನೆ ಅಧ್ಯಕ್ಷ ಗಣೇಶ ಭಟ್ಟ ಉಪ್ಪೋಣಿ ಆರೋಪಿಸಿದ್ದಾರೆ.

ಜುಲೈ 7ರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಠೇವಣಿ ಹಣ ಪಡೆಯಲು ಬಂದಿದ್ದ ವೃದ್ಧರೊಬ್ಬರ ಬಳಿ ಶಾಖೆಯ ಹೊರ ರಾಜ್ಯದ ಸಿಬ್ಬಂದಿ ಉಡಾಫೆ ವರ್ತನೆ ತೋರಿದ್ದಾರೆ. ಕನ್ನಡಿಗರ ಉದ್ಯೋಗ ಕಬಳಿಸಿ ಇಲ್ಲಿಗೆ ಬಂದಿರುವ ಹೊರರಾಜ್ಯದ ಸಿಬ್ಬಂದಿಯ ಉದಾಸೀನ ವರ್ತನೆ ಕನ್ನಡಿಗರ ಆಕ್ರೋಶ ಹೆಚ್ಚಿಸಿದೆ. ಹೊರ ರಾಜ್ಯದ ಸಿಬ್ಬಂದಿಯನ್ನು ಆದಷ್ಟು ಬೇಗ ವರ್ಗಾವಣೆ ಮಾಡಿ, ಕನ್ನಡಿಗ ಸಿಬ್ಬಂದಿ ನೇಮಕ ಮಾಡಬೇಕು. ಇಲ್ಲಿವಾದಲ್ಲಿ ಮುಂದೆ ತೀವ್ರ ಹೋರಾಟ ನಡೆಸಲಾಗುತ್ತದೆ ಎಂದು ಘಟನೆಯ ಸಂದರ್ಭದಲ್ಲಿ ಶಾಖೆಯಲ್ಲಿದ್ದ ಸಂಘಟನೆಯ ಸಂಚಾಲಕ ಪ್ರಸನ್ನ ನಾಯ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT