‘ಹಣ ವರ್ಗಾಯಿಸಿದ ನಂತರ ಬೆಂಕಿ ಬಿದ್ದವರಂತೆ, ಉಪಮುಖ್ಯಮಂತ್ರಿ ಗಲಾಟೆ ಮಾಡಿದರು. ಮುಖ್ಯಮಂತ್ರಿ ರಾಜೀನಾಮೆ ನೀಡಿ ಹೊರಬಂದರು. ನಾವು ಹುಚ್ಚರೋ, ಅವರು ಹುಚ್ಚರೋ ಎಂಬುದನ್ನು ಜನರು ನಿರ್ಧರಿಸಲಿ. ಪಕ್ಷದ ಮರ್ಯಾದೆ ಹೋದರೂ ಪರವಾಗಿಲ್ಲ, ದೇಶದ ಸಂಪತ್ತನ್ನು ಸರಿಯಾಗಿ ಇಟ್ಟು ವಾಪಸ್ಸು ಬಂದಿದ್ದೇವೆ. ಪತ್ರಿಕೆಯವರು ಏನಾದರೂ ಬರೆದುಕೊಳ್ಳಲಿ. ದೇಶಕ್ಕೆ ಒಳ್ಳೆಯದಾಗಬೇಕು. ಪ್ರಧಾನಮಂತ್ರಿ ಹೇಳಿದಂತೆ ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ’ ಎಂದು ಹೇಳಿದರು.