ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಮೇ.ಸಿದ್ದಲಿಂಗಯ್ಯ ಹಿರೇಮಠ ಆಗಸ್ಟ್ 3 ರಂದು ತನಿಖೆ ಕೈಗೊಂಡು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. 15 ವಿವಿಧ ದೂರುಗಳ ಅನ್ವಯ, ನಾಗರಿಕ ಸೇವಾ ನಡತೆ 2021ರ ನಿಯಮ 3ರ ಉಪನಿಯಮ 1(1),(2),(3)ರ ಅಡಿಯಲ್ಲಿ ಕರ್ತವ್ಯ ದುರುಪಯೋಗವಾಗಿದ್ದು, ಅಮಾನತು ಮಾಡಲು ಶಿಫಾರಸು ಮಾಡಿದ್ದರು.