ಬೆಟ್ಟ, ಕುಂಕಿ, ಬಾಣೆ, ಹಾಡಿ ಮೊದಲಾದವುಗಳಲ್ಲಿ ಅರಣ್ಯ ಇಲಾಖೆಯ ಪೂರ್ವಾನುಮತಿಯಿಂದ ಲಾಭ ಹಂಚಿಕೆ ವಿಧಾನದಲ್ಲಿ ಬಿದಿರು ಬೆಳೆಯಲು ಪ್ರೋತ್ಸಾಹಿಸಬಹುದು. ಜಿಲ್ಲೆಯಲ್ಲಿ ಇದಕ್ಕೆ ಬೆಟ್ಟ ಬಳಕೆ ಮಾಡಿಕೊಂಡಲ್ಲಿ ರೈತರಿಗೆ ಹೊಸ ಆರ್ಥಿಕ ಶಕ್ತಿ ಬರಲಿದೆ. ಗ್ರಾಮ ಅರಣ್ಯ ಸಮಿತಿ, ರೈತರು ಮತ್ತು ಸಾಮಾಜಿಕ ಸಹಭಾಗಿತ್ವದಡಿಯಲ್ಲಿ ಬಿದಿರನ್ನು ಪರ್ಯಾಯ ಬೆಳೆಯನ್ನಾಗಿಸಲು ದೊಡ್ಡ ಅವಕಾಶವಿದೆ. ಬಿದಿರಿನಿಂದ ಗುಡಿ ಕೈಗಾರಿಕೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.