ಕಾರವಾರ: ‘ಸಮಾಜ ಸೇವೆಗೆ ಕುರ್ಚಿಯಲ್ಲಿ ಕುಳಿತಿಲ್ಲ ಎಂದು ಹೇಳಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಒಬ್ಬ ನಾಲಾಯಕ್’ ಎಂದು ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಟೀಕಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜಕೀಯದ ಬುನಾದಿಯೇ ಸಮಾಜ ಕಲ್ಯಾಣ ಆಗಿದೆ. ಆದರೆ, ಹೆಗಡೆ ತಾವು ಸಮಾಜ ಸೇವೆಗೆ ಬಂದಿಲ್ಲ, ರಾಜಕೀಯ ಮಾಡಲು ಮಾತ್ರ ಬಂದಿದ್ದೇನೆ ಎಂದಿದ್ದಾರೆ. ಆ ಮೂಲಕ ತಾವು ಅಪ್ರಬುದ್ಧರು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ’ ಎಂದು ಹೇಳಿದರು.