ಪಡಿತರ ಅಂಗಡಿಗೆ ಬರುವ ಕಾರ್ಡುದಾರರು ಭಾರವಾದ ಅಕ್ಕಿಚೀಲವನ್ನು ಹೊರಲು ಸಾಧ್ಯವಾಗದೇ ಸಂಕಟಪಡುತ್ತಿದ್ದರು. ಇದನ್ನು ಗಮನಿಸಿದ ನಾಗಪ್ಪ ಬಿ ಅವರು, ಮಾರುಕಟ್ಟೆ ಠಾಣೆ ವ್ಯಾಪ್ತಿಯ ಆರು ರೇಷನ್ ಅಂಗಡಿಗಳ ಎದುರು, ಆರು ರಿಕ್ಷಾ ವ್ಯವಸ್ಥೆಗೊಳಿಸಿದ್ದಾರೆ. ರೇಷನ್ ಪಡೆಯುವವರು ಈ ಆಟೊರಿಕ್ಷಾಕ್ಕೆ ಕನಿಷ್ಠ ಬಾಡಿಗೆ ನೀಡಿ, ಮನೆ ತಲುಪಬಹುದು. ಲಾಕ್ಡೌನ್ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ಗಳಲ್ಲಿ ಅನುಮತಿಯಿಲ್ಲದೇ ಇಂಧನ ನೀಡುವುದಿಲ್ಲ. ಹೀಗಾಗಿ, ಇದಕ್ಕೂ ಪೊಲೀಸರೇ ಮುಂದಾಗಿ ಇಂಧನ ವ್ಯವಸ್ಥೆಗೊಳಿಸಿದ್ದಾರೆ.