ದುಶ್ಚಟಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ ಡಾ. ದಿನೇಶ್ ಹೆಗಡೆ ಅವರು, ‘ತಂಬಾಕು ಸೇವನೆ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತಿದೆ. ದೇಶದಲ್ಲಿ ನಿತ್ಯ 2500 ಜನರು ಕ್ಯಾನ್ಸರ್ನಿಂದ ಸಾಯುತ್ತಿದ್ದಾರೆ. ತಂಬಾಕು ಸೇವನೆ ಬಗ್ಗೆ ಮಕ್ಕಳು ಎಚ್ಚರಿಕೆಯಿಂದ ಇರಬೇಕು’ ಎಂದರು. ಡಾ. ತನುಶ್ರೀ ಹೆಗಡೆ, ಡಾ. ಮಂಜುನಾಥ್, ಉಪನ್ಯಾಸಕ ಸುಬ್ರಹ್ಮಣ್ಯ, ಅರುಣೋದಯ ಸಂಸ್ಥೆಯ ಸಿಇಒ ಸುಭಾಷ ಮಂಡೂರು, ಅರುಣೋದಯ ಅಧ್ಯಕ್ಷ ಸತೀಶ್ ನಾಯ್ಕ ಉಪಸ್ಥಿತರಿದ್ದರು.