ಇದು ಉಕ್ರೇನ್ನ ವಿನಿಶಿಯಾ ನಗರದಿಂದ ಪಾರಾಗಿ ಶುಕ್ರವಾರ ದೆಹಲಿಗೆ ತಲುಪಿದ ಬನವಾಸಿಯ ಇಮ್ರಾನ್ ನಜಿರ್ ಚೌದರಿ ಮಾತು. ಎಂ.ಬಿ.ಬಿ.ಎಸ್. ಮೂರನೆ ವರ್ಷದ ವಿದ್ಯಾರ್ಥಿಯಾಗಿದ್ದ ಇಮ್ರಾನ್ ಎರಡು ದಿನಗಳ ಹಿಂದೆ ರೊಮೇನಿಯಾ ರಾಜಧಾನಿ ಬುಚಾರೆಸ್ಟ್ ತಲುಪಿದ್ದರು. ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತಲುಪಿದ್ದಾರೆ.