ಶಿರಸಿ: ‘ಕಾತೂರಿನಿಂದ ಬೈಕ್ನಲ್ಲಿ ಬರುತ್ತಿದ್ದೆ. ಎದುರಿನಿಂದ ಬಂದ ಲಾರಿಯ ಚಾಲಕ ಕೈಮಾಡಿದ, ದಾರಿ ಕೇಳಲು ಆಗಿರಬಹುದೆಂದು, ಗಾಡಿ ನಿಲ್ಲಿಸಿದೆ. ಆ ಚಾಲಕ ಕೆಳಗಿಳಿದು, ‘ಸರ್ ನಾನು ನಿಮ್ಮ ಶಿಷ್ಯ. ನಾನು ಎಸ್ಸೆಸ್ಸೆಲ್ಸಿಯಲ್ಲಿ ಫೇಲಾಗಿದ್ದೆ, ಆದರೆ ನೀವು ಕಲಿಸಿದ ಸ್ವಾಭಿಮಾನದ ಪಾಠದಿಂದ ಒಬ್ಬ ಉತ್ತಮ ವ್ಯಕ್ತಿಯಾಗಿ ಜೀವನ ನಡೆಸುತ್ತಿದ್ದೇನೆ’ ಎಂದ. ಆತ್ಮತೃಪ್ತಿಯೆಂದರೆ ಇದೇ. ಇದಕ್ಕಿಂತ ಮಿಗಿಲಾದ ಪ್ರಶಸ್ತಿಯಿಲ್ಲ’ ಎಂದವರು ಅಕ್ಷರಯೋಗಿ, ಉಮ್ಮಚಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಚಂದ್ರಶೇಖರ ಹೆಗಡೆ.