ಶ್ರೀಧರರ ಜನ್ಮದಿನವಾದ ಏ.24ರಂದು ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪತ್ರ, ನಗದು ಹಾಗೂ ನೆನಪಿನ ಕಾಣಿಕೆಯೊಂದಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೈಸೂರು ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತ್ತಕೋತ್ತರ ಕೇಂದ್ರದಲ್ಲಿ (ಚಾಮರಾಜ ನಗರ) ಸಂದರ್ಶಕ ಪ್ರಾಧ್ಯಾಪಕರಾಗಿರುವ ಹನೂರ ಅವರು, 'ಕೇರಿಗೆ ಬಂದ ಹೋರಿ', 'ಕತ್ತಲಲ್ಲಿ ಕಂಡ ಮುಖ', 'ಕಳೆದ ಮಂಗಳವಾರ ಮುಸ್ಸಂಜೆ' ಕಥಾ ಸಂಕಲನ ರಚಿಸಿದ್ದಾರೆ. ಅವರ 'ಅಜ್ಞಾತನೊಬ್ಬನ ಆತ್ಮ ಚರಿತ್ರೆ’ ಕಾದಂಬರಿ ಇಂಗ್ಲಿಷ್ಗೆ ಅನುವಾದಗೊಂಡಿದೆ. ಜಾನಪದ ಕ್ಷೇತ್ರ ಕಾರ್ಯದ ಅನುಭವ ಕಥನ 'ಕಾಲು ದಾರಿಯ ಕಥನಗಳು' ಕೃತಿಯನ್ನು ಪರಿಗಣಿಸಿ, ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಸಮಿತಿ ಅಧ್ಯಕ್ಷ ಡಾ. ಟಿ.ನಾರಾಯಣ ಭಟ್ಟ ಮತ್ತು ಕಾರ್ಯಾಧ್ಯಕ್ಷ ರಾಜಶೇಖರ ಹೆಬ್ಬಾರ ತಿಳಿಸಿದ್ದಾರೆ.