ಪ್ರೌಢಶಾಲಾ ವಿಭಾಗದಲ್ಲಿ ನರಸಿಂಹ ಭಟ್ಟ ನಿರ್ದೇಶನದ ನಂದೊಳ್ಳಿ ಶಾಲೆ ಮಕ್ಕಳ ‘ಶ್ರೀಕೃಷ್ಣ ಸಂಧಾನ’ ಪ್ರಥಮ, ಅನ್ನಪೂರ್ಣಾ ಭಟ್ಟ ನಿರ್ದೇಶನ ಭೈರುಂಬೆ ಶಾರದಾಂಬಾ ಪ್ರೌಢಶಾಲೆಯ ಮಕ್ಕಳ ‘ರಾಮ ನಿರ್ಯಾಣ’ ದ್ವಿತೀಯ, ಅರುಣಕುಮಾರ ಭಟ್ಟ ನಿರ್ದೇಶನದ ಜಡ್ಡಿಗದ್ದೆ ಸರ್ಕಾರಿ ಪ್ರೌಢಶಾಲೆ ಮಕ್ಕಳ ‘ಗುರು ದಕ್ಷಿಣೆ‘ ತಾಳಮದ್ದಲೆ ತೃತೀಯ ಸ್ಥಾನ ಪಡೆದುಕೊಂಡಿತು. 16 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಪ್ರಶಸ್ತಿಪತ್ರ ವಿತರಿಸಿದರು.