ಮೀನುಗಾರಿಕೆಗೆ ತೆರಳಲು ಕಡಲತೀರದಲ್ಲಿ ಲಂಗರು ಹಾಕಿದ್ದ ದೋಣಿಗಳು ಮಳೆಯ ನೀರಿನ ರಭಸಕ್ಕೆ ಸಮುದ್ರದ ಪಾಲಾಗಿವೆ. ಅನೇಕ ದೋಣಿಗಳನ್ನು ಮೀನುಗಾರರು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿದ್ದಾರೆ. ಮುಂಡಳ್ಳಿ, ಬಂದರ, ತೆಂಗಿನಗುಂಡಿ ಹಾಗೂ ಅಳ್ವೆಕೋಡಿ ಭಾಗದಲ್ಲಿ ನೆರೆಗೆ 130 ಮೀನುಗಾರರ
ದೋಣಿಗಳಿಗೆ ಸಂಪೂರ್ಣ ಹಾನಿಯಾಗಿದೆ. 75 ದೋಣಿಗಳಿಗೆ ಭಾಗಶಃ ಹಾನಿಯಾಗಿದೆ. 208 ದೋಣಿಗಳ ಬಲೆ ಸಮುದ್ರ ಪಾಲಾಗಿದೆ. ಮೀನುಗಾರರ ಮಾಹಿತಿ ಪ್ರಕಾರ ಒಂದು ಗಿಲ್ನೆಟ್ ದೋಣಿಗೆ ₹8 ಲಕ್ಷ ಮೌಲ್ಯ ಇದ್ದರೆ, ಪಾತಿ ದೋಣಿಗೆ 2 ಲಕ್ಷ ಮೌಲ್ಯ ಇದೆ. ಜೀವನಕ್ಕೆ ಆಧಾರವಾದ ಈ ದೋಣಿಗಳ ಹಾನಿಯಿಂದ ಮುಂದಿನ ದಾರಿ ಕಾಣದೆ ಮೀನುಗಾರರು ಕಂಗೆಟ್ಟು ಹೋಗಿದ್ದಾರೆ.