ವಿಕಾಸಾಶ್ರಮದಿಂದ ಹೊರಟ ಜಾಥಾ ಅಶ್ವಿನಿ ವೃತ್ತ, ಹೊಸಪೇಟೆ ರಸ್ತೆ, ದೇವಿಕೆರೆ, ಶಿವಾಜಿ ಚೌಕ, ಚನ್ನಪಟ್ಟಣ ಬಝಾರ ಮಾರ್ಗವಾಗಿ ಸಂಚರಿಸಿತು. 52 ವರ್ಷಗಳಿಂದ ನಿರಂತರವಾಗಿ ಸೈಕಲ್ ಬಳಸುತ್ತಿರುವ ಉಡುಪಿಕರ ಕ್ಲಾಥ್ ಸ್ಟೋರ್ಸ್ ಮಾಲೀಕ ಪ್ರಕಾಶ ಉಡುಪಿಕರ ಜಾಥಾಕ್ಕೆ ಚಾಲನೆ ನೀಡಿದರು. ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಕೈಜೋಡಿಸಿದ್ದವು.