ನಗರದ ವಿವಿಧ ಕಡೆಗಳಲ್ಲಿ ಹಾಗೂ ಕಡವಾಡ, ಅಮದಳ್ಳಿ, ತೋಡೂರು ಕಾಲೊನಿ, ಚೆಂಡಿಯಾ ಮುಂತಾದೆಡೆ ಮನೆ ಮನೆ ಪ್ರಚಾರನಡೆಸಲಾಯಿತು. ಕಡವಾಡದಲ್ಲಿ ಹಮ್ಮಿಕೊಳ್ಳಲಾದ ಬೂತ್ ಕಮಿಟಿಯ ಸಭೆಯಲ್ಲಿ ಮಾತನಾಡಿದ ರೂಪಾಲಿ ನಾಯ್ಕ, ‘ ಪಕ್ಷದ ಅಧ್ಯಕ್ಷಅಮಿತ್ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಯಾವುದೇ ಸಂಸದರ ಅಥವಾ ಶಾಸಕರ ಬಗ್ಗೆ ಮಾತನಾಡುವುದಿಲ್ಲ. ಅವರು ಬೂತ್ ಕಮಿಟಿ ಗಟ್ಟಿಯಾದರೆ ಪಕ್ಷ ಶಕ್ತಿಯುತವಾಗಿರುತ್ತದೆ ಎಂದು ಹೇಳುತ್ತಿರುತ್ತಾರೆ. ಸ್ಪರ್ಧೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು’ ಎಂದು ಹೇಳಿದರು.